Tuesday, August 9, 2011

ಕಿಚ್ಚು :: ಭಾಗ - ೫




೧೦



ಸಹನೆಗೆ ಅನ್ವರ್ಥ ನಾಮದಂತಿರುವ ವಸುಂದರ ಈಗ ತನ್ನ ಎಲ್ಲಾ ಸಹನೆ  ಕಳಕೊಂಡಿದ್ದಳು, ತನ್ನ ತಂದೆಯವರನ್ನು ಜೀವಕ್ಕಿಂತ ಹೆಚ್ಚು ಪ್ರಿತಿಸುತಿದ್ದಳು ಆದರೆ ಅವರ ಒಂದು ನಡೆ ಇವಳ ಮನದಲ್ಲಿನ ಎಲ್ಲಾ ಪ್ರೀತಿಯನ್ನು ಸುಟ್ಟು ಹಾಕಿತು, ತನ್ನವರೆಂದು ಕೊಂಡವರೆಲ್ಲರ ಮೇಲೆ ದ್ವೇಷ ತಾಳಿದ್ದಳು. ಈಗ ಅವಳ ಪಾಲಿಗೆ ನಾನೇ ಎಲ್ಲಾ ಸರ್ವಸ್ವ ನಾಗಿದ್ದೆ. ತಂದೆಯವರು ಅಂಗಳ ಬಿಡುವಾಗ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಅತ್ತಳು.ಅಲ್ಲಿ ಅವಳ ಹೆತ್ತವರು ತಮ್ಮ ಮಗಳು ತನ್ನ ಭವಿಷ್ಯವನ್ನು ಕೈಯಾರೆ ಹಾಳುಮಾಡಿ ಕೊಂಡಳಲ್ಲಾ ಎಂದು ವ್ಯಥೆ ಪಡುತ್ತಿದ್ದರು.
 
ನಾನು ಕೆಲಸ ಹುಡುಕುವುದು ಅನಿವಾರ್ಯವಾಗಿತ್ತು, ಆದರೆ ಮನನೊಂದ ಹೆಂಡತಿಯನ್ನು ಪರಿಸ್ತಿತಿಯಲ್ಲಿ ಬಿಟ್ಟು ಅದೇಕೋ ಮನಸಾಗಲಿಲ್ಲ, ಅಣ್ಣನೂ ಬಳಗ್ಗೆಯೇ ಮನೆ ಬಿಟ್ಟಿದ್ದನು, ಮನೆಯಲ್ಲಿರುವ ಇತರ ಗೆಳೆಯರನ್ನು ನಮಗಾಗಿ ಸಲ್ಪ ದಿನದ ಮಟ್ಟಿಗೆ ಆತ ಹೊರ ಹಾಕಿದ್ದ. ಒಂದು ಕೋಣೆಯ ಪುಟ್ಟ ಮನೆಯನ್ನು ನವದಂಪತಿಗಳಿಗಾಗಿ ಆತ ಒಂದು ವಾರದ ಮಟ್ಟಿಗೆ ಬಾಡಿಗೆಗೆ ನೀಡಿದ್ದನು, ಅವನೂ ಪಕ್ಕದ ಮನೆಯಲ್ಲಿ ರಾತ್ರಿ ಕಳೆಯುತಿದ್ದ, ಅವನಿಗೆ ಇನ್ನೂ ನಾವು ಹೊರೆಯಾಗಿರುವುದು ನಮಗಿಷ್ಟ ವಿರಲಿಲ್ಲ, ಕೆಲಸ ಹುಡುಕ ಬೇಕು, ನಮ್ಮಿಬ್ಬರ ಹೊಟ್ಟೆ ನಾವು ತುಂಬಿಸಬೇಕು ಎಂಬ ಮಾತೇ ನಮ್ಮಿಬ್ಬರ ಮನಸನ್ನು ಕೊರೆಯುತ್ತಿತ್ತು.
ವಸುಂದರ IAS  ಓದಬೇಕು ಎಂಬ ಕನಸು ಕಂಡಿದ್ದಳು, ಆದರೆ ನಮ್ಮ ಆತುರದ ನಿರ್ಧಾರದಿಂದ ಅವಳ ಓದು ಅರ್ಧದಲ್ಲೇ ನಿಲ್ಲಿಸಿದಂತಾಯಿತಲ್ಲ ಎಂದು ಬಾರಿ ಬಾರಿ ನನ್ನಲ್ಲಿ ಪಾಪ ಪ್ರಜ್ಞೆ ಕಾಡುತಿತ್ತು.ನಾನೇನೋ ಓದಿನಲ್ಲಿ ಹುಷಾರಿರಲಿಲ್ಲ ಓದಿದರೂ ಎಲ್ಲಿಯಾದರೂ ಸಣ್ಣ ಸಂಬಳಕ್ಕೆ ನಿಲ್ಲುವಂತ ಕೆಲಸ ಸಿಕ್ಕುತಿತ್ತೆ ವಿನಹ ಬ್ಯಾಂಕ್ನಲ್ಲಿ ನಮ್ಮ ಮುಂದಿನ ಪೀಳಿಗೆಗೆ ಕಾಸು ಕೂಡಿಡುವಂತಹ ಭಾರಿ ಕೆಲಸವೇನೋ ಸಿಗುತಿರಲಿಲ್ಲ, ಅವಳ ಬಗ್ಗೆ ಆಲೋಚಿಸುವಾಗ ಅವರ ತಂದೆ ಅಂದ ಪ್ರತಿಯೊಂದು ಮಾತು ನಿಜ ಎಂದನಿಸುತಿತ್ತು ಆದರೆ ಅವಳ ಕಣ್ಣಲ್ಲಿ ನೀರು ಹರಿಸಿದಕ್ಕೆ ಅವರ ಮೇಲೆ ಅಪಾರವಾದ ಕೋಪವು ಬರುತಿತ್ತು. ಕೋಪದ ಜ್ವಾಲಾಗ್ನಿ ಹೃದಯದ ಎಡೆಯಲ್ಲಿರುವ ಅವರ ಬಗೆಗಿನ ಸಣ್ಣ ಅಭಿಮಾನವನ್ನು ಸುಟ್ಟು ಹಾಕಿತು.

ಹೊರಗಿನ ಬಾಗಿಲು ಹಾಕಿ ಒಳ ಬಂದೆ, ವಸುಂದರ ನನ್ನಲ್ಲಿ "ನನಗೆ ನೀನು ಬೇಕು,ಯಾರು ಬೇಡ,ಅಪ್ಪ ಅಮ್ಮ ಅವರ ಜಾತಿ, ಅಂತಸ್ತು, ಅವರ ಪ್ರೀತಿ ಏನು ಬೇಡ , ನನ್ನ ಜೊತೆ ಕೊನೆಯವರೆಗೆ ಇರುವಿಯಲ್ಲಾ ...?ಯಾರು ಏನು ಹೇಳಿದರು ಅವರನ್ನು ಎದುರಿಸುವಿಯಲ್ಲಾ ...?"

ನಾನು "ಇರುವೆ ಕಣೆ, ಆದರೆ ನಾವು ಮಾಡಿದ್ದು ತಪ್ಪೆಂದು ನನಗೀಗ ಅನಿಸುತ್ತಿದೆ, ಅವರನ್ನು ನಾವು ಅರ್ಥೈಸ ಬೇಕಿತ್ತು, ಅವರು ನಮ್ಮ ಒಳ್ಳೇದಕ್ಕೆ ಹೇಳುತ್ತಿದ್ದರು ಎಂದೆನಿಸುತ್ತಿದೆ, ನಿನಗೆ ಅವರು ಕೊಟ್ಟಂತ ಉಪಚಾರ ನನ್ನಿಂದ ಕೊಡಲಾಗುವುದಿಲ್ಲ, ನಿನ್ನ ಮುಂದಿನ ಓದಿಗೆ ಸಹಾಯ ಮಾಡಲಾಗುವುದಿಲ್ಲ,ನಾವು ತಪ್ಪು ಮಾಡಿದೆವು ಕಣೇ, ಒಂದು ಕ್ಷಣ ನಾವು ಮನೆ ಬಿಟ್ಟು ಬರ ಬೇಕಾದರೆ ನಮ್ಮವರನ್ನು ನೆನೆಯ ಬೇಕಿತ್ತು ...."
 
ಜ್ವಾಲಾಗ್ನಿಯ ಸೆರಗಲ್ಲಿರುವ ವಸುಂದರೆಗೆ ನನ್ನ ಮಾತಿನ ಅರ್ಥ ತಿಳಿಯದೇ ಹೋಯಿತು, ನನ್ನಲ್ಲಿ "ನಿಮ್ಮ ಚಪಲ ಎರಡು ರಾತ್ರಿಯಲ್ಲೇ , ತೀರಿತಲ್ಲಾ ...? ನೀವು ಇದಕ್ಕಾಗಿಯೇ ನನ್ನನ್ನು ಈಗ ಮರಳಿ ಹೋಗು ಅನ್ನು ತಿದ್ದಿರಲ್ಲಾ ... ನಾನು ನಿಮ್ಮ ಒಳಗಿನ ಗೂಡಾಲೋಚನೆ ತಿಳಿಯದೇ ನಿಮ್ಮನ್ನು ನಂಬಿ ನನ್ನ ಹೆತ್ತವರನ್ನು ಬಿಟ್ಟು ಬಂದೆ ... ಆದರೆ ಈಗ ನಾನು ಮರಳಿ ಹೋದರೆ ನಮ್ಮ ಪ್ರೀತಿಯನ್ನು ನೋಡಿ ಲೋಕವೇ ಹಾಸ್ಯ ಮಾಡುವುದು, ನನಗೆ ಸರಿಯಾದ ಪಾಠ ನೇ ಕಲಿಸಿದಿರಿ..."ಎನ್ನುತ್ತಾ ಬದಿಯಲ್ಲಿದ್ದ ದಿಂಬನ್ನು ತಬ್ಬಿ ಅಳಲಾರಂಬಿಸಿದಳು.

ಅವಳನ್ನು ಪಡೆದ ಖುಷಿಯಲ್ಲೇ ಹಿಂದಿನ ಎರಡು ರಾತ್ರಿಗಳನ್ನು ನಾನು ಅನುಭವಿಸಿದ್ದೆ,ಆದರೆ ಈಗ ಒದಗಿರುವ ಸಂಧರ್ಭದ ಕಲ್ಪನೆಯೇ ನನ್ನಲ್ಲಿರಲಿಲ್ಲ ಮಧುರಗಳಿಗೆಯಲ್ಲಿ ,ತಡವಡಿಸುತ್ತಾ ನಾನು ಅವಳಲ್ಲಿ "ವಸುಂದರಾ ಹಾಗೆ ಏಕೆ ಅಂದು ಕೊಳ್ಳುತ್ತಿಯಾ ...?ನಿನ್ನನ್ನು ನಾನು ಪವಿತ್ರ ಪ್ರೀತಿಯ ಕಣ್ಣಿಂದ ನೋಡಿದ್ದೆ ವಿನಹ ಕಾಮಸಾದನೆ ನನ್ನ ಛಲ ವಾಗಿರಲಿಲ್ಲ, ತುಂಬಾ ದಿನದ ನಂತರ ನೀನು  ಸಿಕ್ಕಿದ್ದು, ನಿನ್ನನ್ನು ಪಡಕ್ಕೊಂಡ ಖುಷಿ,ಎಲ್ಲಾ ಒಟ್ಟಾಗಿ ನಿನ್ನಲ್ಲಿ ಕಾಮಪಾಶಕ್ಕೆ ಬಲಿಯಾದೆ ಎರಡು ರಾತ್ರಿಯಲ್ಲಿ ....
ನಿನ್ನನ್ನು ನಾನು ಈಗ ಮರಳಿ ಹೋಗು ಅಂದಿಲ್ಲಾ , ಬದಲಿಗೆ ನಾವು ತಪ್ಪಾದ ನಿರ್ಣಯ ತೆಗೆದು ಕೊಂಡೆವು,ಅಂದಿದ್ದು.....
ಆದದೆಲ್ಲಾ ಆಯಿತು ನಿನ್ನನ್ನು ಕಳಕೊಳ್ಳಲು ನನಗೆ ಇಷ್ಟವಿಲ್ಲ, ಯಾರು ಬಂದರೂ ನಿನ್ನ ಎದುರಿಸುತ್ತೇನೆ,ನಿನ್ನನ್ನು ಸುಖವಾಗಿಡಲು ಎಲ್ಲಾ ಪ್ರಯತ್ನ ನಾ ಮಾಡುತ್ತೇನೆ,ನೀನು ನನ್ನಲ್ಲಿತ್ತ ನಂಭಿಕೆಗೆ  ನಾನೆಂದು ದ್ರೋಹ ಮಾಡುವುದಿಲ್ಲ.ಸಮಾಧಾನ ಮಾಡಿಕೊ ..."ಅಂದೆ.
 
ಅವಳೂ ಒಂದು ನಿರಾಳ ಉಸಿರು ಬಿಟ್ಟಳು.
 
ನಮ್ಮ ಜೀವನ ಪಡೆದ ತಿರುವನ್ನು ನಾನು ಒಂದು ಬದಿಯಲ್ಲಿ ಕುಳಿತು ಮೆಲುಕು ಹಾಕುತಿದ್ದರೆ, ಮೂಲೆಯಲ್ಲಿ ವಸುಂದರಾ ಮನೆಯವರ ವಿಶ್ವಾಸ ನಾನು ಕೆಡುವಿದೆನಲ್ಲ ಎಂದು ಆಲೋಚಿಸಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು, ಇಲ್ಲಿ ವರೆಗೆ ಒಂದು ಹನಿ ಕಣ್ಣೀರು ಬರಲು ಬಿಟ್ಟಿರಲಿಲ್ಲ ಹೆತ್ತವರು, ಆದರೆ ಇಂದು ವಯಸ್ಸು-ಮನಸ್ಸಿನ ಹುಚ್ಚಾಟಕ್ಕೆ ಕಣ್ಣೀರು ಕಟ್ಟೆ ಒಡೆದ ಅಣೆಕಟ್ಟಿನಂತೆ ಸರಾಗವಾಗಿ ಹರಿಯುತ್ತಲೇ ಇತ್ತು.
 
ಮಧ್ಯಾಹ್ನ ವಾಗುತಿದ್ದಂತೆ ಹರಿವು ಕಮ್ಮಿಯಾಯಿತು, ಒಮ್ಮೆಲೇ ಅವಳ ಬಿಕ್ಕಳಿಕೆ ನಿಂತಿತು, ನನ್ನ ಬಳಿಗೆ ಬಂದು "ನಾವು ಹೋಗೋಣ,ತಂದೆಯವರು ಬಸ್ಸ್ ಹತ್ತುವ ಸ್ಥಳಕ್ಕೆ , ಅವರನ್ನು ನೋಡಬೇಕು ಅಂತ ಅನಿಸುತ್ತಿದೆ."
ನನಗೇಕೋ ಅವಳೂ ನನಗಿಂತ ಮನೆಯವರನ್ನು ಹೆಚ್ಚು ಇಷ್ಟ ಪಡುವಂತೆ ಕಂಡಳು , ನಾನು "ಏನು ನನ್ನನ್ನು ಬಿಟ್ಟು ಹೋಗುತ್ತಿಯಾ ..?"ಆವಳು ಇಲ್ಲ "ಒಂದು ಬಾರಿ ಅವರಲ್ಲಿ ನಾವು ಮಾಡಿದ ತಪ್ಪಿಗೆ ಕ್ಷಮೆ ಕೇಳಬೇಕು.ಅಷ್ಟೇ "ನಾನು "ಸರಿ ಸಂಜೆ ಹೋಗುವ" ಅಂದೆ. ಅವಳಲ್ಲೂ ಮಂದಹಾಸ ಮೂಡಿತು.


೧೧



ಕೈಯಲ್ಲಿ ಕಾಸಿರಲಿಲ್ಲ,ಗೆಳೆಯನ ಕೈಯಲ್ಲಿ ೧೫ ರುಪಾಯಿ ಸಾಲ ಪಡಕ್ಕೊಂಡು, ಬೆಳಗ್ಗೆ ರಾಯರು ಹೇಳಿದ ಬಸ್ಸ್ ಸ್ಟಾಪ್ ತಲುಪಿದೆವು. ರಾಯರು ಆಗಲೇ ಅಲ್ಲಿ ತಲುಪಿ ಆಗಿತ್ತು . ನಮ್ಮನ್ನು ನೋಡುತಿದ್ದಂತೆ "ಬಾ ಮಗಳೇ .."ಅಂದರು ಇಲ್ಲಿವರೆಗೆ ತಂದೆಯವರು, ಮನೆಯವರಿಗಾಗಿ ಬಿಕ್ಕಳಿಸುತಿದ್ದ ವಸುಂದರನ ಪ್ರೀತಿ ಈಗ ಮಾಯವಾಗಿತ್ತು, ಒಂದೇ ಮಾತಲ್ಲಿ "ನಾನು ನಿಮ್ಮೊಂದಿಗೆ ಬರಲು ಬಂದಿಲ್ಲ, ಬದಲಿಗೆ ನಾನು ಮಾಡಿದ್ದು ತಪ್ಪಾಯಿತು,ಕ್ಷಮಿಸಿ ಎಂದು ಕ್ಷಮೆ ಕೇಳಲು ಬಂದಿದ್ದೇನೆ.ಕ್ಷಮಿಸುವಂತಿದ್ದರೆ ಕ್ಷಮಿಸಬಹುದು, ಇಲ್ಲಂಥಾದರೆ ಬಂದ ದಾರಿಗೆ ಸುಂಕವಿಲ್ಲ ಎಂದು ತಿರುಗಿ ಹೋಗುತ್ತೇನೆ "ಅವಳ ಮಾತು ಕ್ಷಮೆ ಯಾಚಿಸಿದ್ದಂತಿರಲಿಲ್ಲ ಬದಲಿಗೆ ಪಿಸ್ತೂಲು ಕುತ್ತಿಗೆಯಲ್ಲಿಟ್ಟು  ಖೈದಿಗೆ ಆದೇಶಿಸಿದ್ದಂತಿತ್ತು.
 

ಶಾಂತ ಸ್ವಭಾವದ ಮುದ್ದು ಹುಡುಗಿಯಲ್ಲಿನ ರೀತಿಯ ಬದಲಾವಣೆ ಕಂಡ ಅವಳ ಅಮ್ಮ "ನಮ್ಮ ಮಗಳಲ್ಲಾ  ಇವಳು, ಯಾರಿಗಾಗಿ ನೀವು ಕಾಯುತಿದ್ದಿರಾ ...?ನಮಗೆ ಮಕ್ಕಳು ಹುಟ್ಟಲೇ ಇಲ್ಲ ಇನ್ನೇಕೆ ನೀವು ಇಲ್ಲದ ಮಗಳ ಪ್ರೀತಿಗೆ ಹಂಭಲಿಸುತ್ತಿದ್ದಿರಾ...?ಬನ್ನಿ ಹೋಗೋಣ,ಮಂಗಳೂರಿಗೆ. ಬೆಂಗಳೂರಿನ ಪಯಣ ತುಂಬಾನೆ ಚೆನ್ನಾಗಿತ್ತು... "ಎನ್ನುತ್ತಾ ಬಸ್ಸ್ ಹತ್ತಿದರು.
 
ಹೆತ್ತ ತಾಯಿಗೆ ಮಗಳ ಬಗೆಗಿನ ಪ್ರೀತಿ ಅವರ ಕಣ್ಣಲ್ಲಿ ಆಗತಾನೆ ಮೂಡಿದ ಕಂಬನಿಯಲ್ಲಿ ಕಾಣುತಿತ್ತು, ಅವರು ಅದನ್ನು ಯಾರಿಗೂ ಕಾಣಬಾರದೆಂದು ಒರಸಿ ಬಿಟ್ಟರು.

ಕೆಳಗಿದ್ದ ಅವಳ ಮಾವ "ಹೆಣ್ಣೇ ಇಷ್ಟೊಂದು ಅಹಂಕಾರ ಒಳ್ಳೆದಲ್ಲಾ ,ನಾಳೆ ನೀನು ರೋಧಿಸಿದರೆ ನಿನ್ನ ಕಣ್ಣೀರು ಒರೆಸಲು ಯಾರು ಬರಲಾರರು, ಮೂಡ ನಿರ್ಧಾರ ತೆಕ್ಕೊಂಡಿದ್ದಿಯಾ ಕಾಲ ಪಾಠ ಕಲಿಸುತ್ತದೆ."ಅಂದರು.

ಮೊದಲಿನಿಂದಲೂ ಅವರನ್ನು ಧ್ವೆಶಿಸುತ್ತಿರುವ ವಸುಂದರೆ ಅವರ ಮೇಲೂ ಹೌಹಾರಿದಳು."ನೀವ್ಯಾರು ನನ್ನ ಭವಿಷ್ಯದ ಬಗ್ಗೆ ಕಾಳಜಿ ಇಡಲು, ನನ್ನ ಹೆತ್ತ ತಂದೆ ತಾಯಿಯರೇ ಸುಮ್ಮನಿರಬೇಕಾದರೆ... ,ನೀವೇನೂ ಹೀರೋ ಗಿರಿ ತೋರಿಸುವುದು..? ನನ್ನ ಸೊಸೆ ಮಾಡಿ ನನ್ನ ತಂದೆಯವರ ಆಸ್ಥಿ ಒಳ ಹಾಕಲು ನಿಮ್ಮ ಪ್ರಯತ್ನ ಅಂತ ಕರಿಯ ಬೇಕೇ ರೀತಿಯ ಕೃತಕ ಪ್ರೀತಿಗೆ ..?" ಅಂದಳು.

ಅವರು "ನನಗೇಕೆ ಬೇಕಿತ್ತು ಸಾಹಸ .. ಬುದ್ಧಿ ಹೇಳಲು ಹೋಗಿ ಕೆಟ್ಟವನಾದೆ, ಕ್ಷಮಿಸು ತಾಯೆ ...ನಿನ್ನ ದಾರಿ ನಿನಗೆ ..."ಎನ್ನುತ್ತಾ ಅವರೂ ಬಸ್ಸ್ ಹತ್ತಿದರು.

ಆಶೀರ್ವಾದ
ಪಡೆಯುವ ನೆಪದಲ್ಲಿ ವಸುಂದರ ರಾಯರ ಕಾಲು ಮುಟ್ಟಲು ಮುಂದಾದಳು, ರಾಯರು ಮೆಲ್ಲನೆ ಕಾಲು ಹಿಂದೆ ಮಾಡಿದರು,ಇಲ್ಲಿಗೆ  ರಾಯರು ತಮ್ಮ ಮತ್ತು ಕರುಳ ಬಳ್ಳಿಯ ಸಂಭಂಧಕ್ಕೆ ತಿಲಾಂಜಲಿ ಇಟ್ಟರು.
 
ಮನೆಯವರೆಲ್ಲರೂ ಬಸ್ಸ್ ಹತ್ತಿ ಕುಳಿತಿರಬೇಕಾದರೆ, ತಮ್ಮ ಬೆಂಗಳೂರು ಕೆಲಸ ಮುಗಿಸಿ ಬಂದ ಮಂಗಳೂರಿನ ಸಚಿವರು ನಮ್ಮಿಬ್ಬರಲ್ಲಿ "ಎಂಥ ಕೆಲಸ ಮಾಡಿದಿರಯ್ಯಾ, ನೀವಿಬ್ಬರು ಸೇರಿ, ಊರಿಗೆ ಊರೇ ಗೌರವ ಕೊಡುತಿದ್ದ ರಾಯರ ಕತ್ತು ತಗ್ಗಿಸುವ ಕೆಲಸ ಮಾಡಿದಿರಲ್ಲ, ಅವರು ನಿಮ್ಮ ಪ್ರೀತಿಯ ದ್ವೇಷಿ ಯಾಗಿರಲಿಲ್ಲ ಬದಲಿಗೆ ನಿಮ್ಮ ನಿರ್ಧಾರದ ಧ್ವೇಶಿ ಆಗಿದ್ದರು, ನಿಮ್ಮ ಆತುರದ ನಿರ್ಧಾರದಿಂದ ಅವರ ಸಂಭಂದವನ್ನೇ ಕಳ ಕೊಂಡಿರಲ್ಲಾ .. ಮಗಳೇ ವಸುಂದರಾ ನಿನ್ನನ್ನು ಹುಟ್ಟಿನಿಂದ ನೋಡುತಿದ್ದೇನೆ, ಪ್ರತಿಯೊಂದಕ್ಕೂ ಅವರು ಅಸ್ತು ಅನ್ನುತ್ತಿದ್ದರು, ಪ್ರೀತಿ ಅವರು ನಿರಾಕರಿಸುತ್ತಿರಲಿಲ್ಲ, ನೀವು ನಿಮ್ಮ ಭವಿಷ್ಯ ಗಟ್ಟಿ ಮಾಡಿ ನಿಮ್ಮ  ಪ್ರೀತಿ ಬಗೆಗಿನ ನಿರ್ಧಾರ ತಿಳಿಸಬೇಕಿತ್ತು, ಅದು ಬಿಟ್ಟು ಆತುರದ ನಿರ್ಧಾರ ತೆಗೆದು ತಪ್ಪು ಮಾಡಿದಿರಿ. ಈಗ ನೀನು ಮಾಡಿದ ತಪ್ಪನ್ನು ಒಪ್ಪಿ ಕ್ಷಮೆ ಯಾಚಿಸಿದರೆ ಅವರು ನಿಮ್ಮಿಬ್ಬರ ಭವಿಷ್ಯಕ್ಕೆ ಉತ್ತಮ ಭುನಾದಿಯನ್ನೇ ಹಾಕುತಿದ್ದರು,ಅದು ಬಿಟ್ಟು ನೀನು ಪ್ರೀತಿಯ ದುರಹಂಕಾರಿ ಯಾಗಿ ಮಾತಾಡಿ ಅವರಿಗೆ ತುಂಬಾ ನೋವು ತಂದಿ ಮಗಳೇ,ಎಲ್ಲಿದ್ದರು ಸುಖವಾಗಿರು ಎಂದೇ ನಾ ಹರಸುವೆ, ಆದರೆ ಇನ್ನು ಮುಂದೆ ನಿನ್ನ ಮನೆಯವರ ಎದುರು ಬಂದು ನೀನು ಅವರ ಸಂಭಂದವನ್ನು ನೆನಪಿಸಬೇಡ, ಕಳೆದ ಮೂರು ದಿನಗಳಿಂದ ನಿನ್ನ ಮನೆಯವರ ಪ್ರತಿಯೊಂದು ಆಗು ಹೋಗು ನಾ ನೋಡುತ್ತಿದ್ದೇನೆ, ಅವರಲ್ಲಿ ಇನ್ನು ನೀನು ಕೊಡುವ ಶಿಕ್ಷೆ ಸಹಿಸಲು ಶಕ್ತಿ ಉಳಿದಿಲ್ಲ... "ಎನ್ನುತ್ತಾ ಅವರು ಬಸ್ಸ್ ಹತ್ತಿದರು
 

ನನ್ನಲ್ಲಿನ ಪ್ರತಿಯೊಂದು ಕೊರತೆ ಅವಳಿಗೆ ಮೂರು ದಿನದಲ್ಲಿ ಅರಿವಾಗಿತ್ತು.ಆದರೂ ಆವಳು ತನ್ನ ಹೆತ್ತವರಲ್ಲಿ ನನ್ನ ಪರ ಮಾತಾಡಿದಳು, ೧೮ ನಾರಿಯಲ್ಲಿ ಮನೆಯವರ ಬಗ್ಗೆ ಧ್ವೇಶದ ಜ್ವಾಲೆ ಹೊತ್ತಿ ಉರಿಯುತ್ತಿತ್ತು.ಮನೆಯವರು ಮಗಳು ಮಾಡಿದ ಕಾರ್ಯಕ್ಕೆ ಹೆತ್ತಮಗಳು ಎಂಬುದನ್ನು ಮರೆತು ಇನ್ನೊಂದು ಬಗೆಯ ಕಿಚ್ಚಿಗೆ ಬಲಿಯಾದರೆ, ರಾಯರ ಪ್ರಗತಿಕ್ಕಂಡು ಇಷ್ಟು ದಿನ ಅಸೂಯೆ ಪಡುತಿದ್ದ ಅಕ್ಕ ಪಕ್ಕದವರು ಚುಚ್ಚು ಮಾತಿನ ಶೂಲದಿಂದ ನೊಂದ ಮನೆ ಮನಗಳನ್ನು ಚುಚ್ಚುತ್ತಿದ್ದರು.
ಆದರೆ ವಸುಂದರೆಯ ಎದೆಯಲ್ಲಿ ನನ್ನ ಬಗೆಗಿನ ನಿರ್ಮಲ ನೀಲಾಂಜನ ಪ್ರಕಾಶಮಾನವಾಗಿ ಬೆಳಗುತಿತ್ತು.


೧೨

ಹದಿಹರೆಯದ ಪ್ರೇಮ ಎಂದೂ ಸುಂದರ, ನಾವಿಬ್ಬರು ರಸಗಳಿಗೆಯ ಒಂದೊಂದು ಹನಿಯನ್ನು ಅನುಭವಿಸುತಿದ್ದೆವು, ಕೈಯಲ್ಲಿ ಹಣವಿಲ್ಲ, ಆದರೂ ನಾಳಿನ ಚಿಂತೆ ನಮ್ಮಲ್ಲಿರಲಿಲ್ಲ, ಇಬ್ಬರು ಮನೆ ಬಿಟ್ಟಿರುವುದರಿಂದ ಹಿರಿಯರ ಸರಿ-ತಪ್ಪು ಆದೇಶವು ನಮ್ಮ ಸುಳಿಯುತಿರಲಿಲ್ಲ. ಪ್ರೇಮ ಮನಸನ್ನು ತುಂಬುತಿತ್ತೇ ವಿನಃ ನಮ್ಮ ಹಸಿದ ಹೊಟ್ಟೆ ತುಂಬುತಿರಲಿಲ್ಲ, ಅಣ್ಣ ಗಣೇಶ್ ನಮ್ಮನ್ನು ಏನು ಕಮ್ಮಿ ಆಗದಂತೆ ನೋಡಿಕೊಳ್ಳುತಿದ್ದ, ತನಗೆಲ್ಲೋ ದೊಡ್ಡ ಕಂಪೆನಿಯಲ್ಲಿ ಸೆಕ್ಯುರಿಟಿ ಕೆಲಸ ಎಂದು ಹೇಳುತಿದ್ದ, ಕೈ ತುಂಬಾ ಸಂಬಳ ಇದೆ, ನೀನೇನು ಯೋಚಿಸಬೇಡ ನಿನಗೂ ಕೆಲಸ ಕೊಡಿಸುತ್ತೇನೆ, ಅಂದಿದ್ದ. ರಾತ್ರಿಯ ಫಾಳಿ ಇದೆ ಎಂದು ಮನೆಗೆ ಬರುವುದನ್ನು ನಿಲ್ಲಿಸಿದ. ಒಂಟಿ ಮನೆಯಲ್ಲಿ ನಮ್ಮ ನರ್ತನವು ದಿನ ಕಳೆದಂತೆ ಹೆಚ್ಚಾಗುತ್ತಾ ಹೋಯಿತು.
 
ಯಾವಾಗಿನಂತೆ ನಿಶ್ಚಿಂತೆಯಾಗಿ ಬೆಳಗ್ಗೆ ಎದ್ದು ವಸುಂದರಳನ್ನು ಎಬ್ಬಿಸಿದೆ, ನಾಲ್ಕರವರೆಗಿನ ತನ್ನ ಡ್ಯುಟಿ ಮುಗಿಸಿ ಗಣೇಶಣ್ಣ ಮನೆ ತಲುಪಿ ಬೆಳಗಿನ ಡ್ಯುಟಿಗೆ ಹೋಗಲು ಅಣಿಯಾಗುತಿದ್ದ, ಅಡುಗೆಮನೆಯಲ್ಲಿ ಅಣ್ಣನ ತಿಂಡಿ ತಯಾರಿ ಮುಗಿದಿದೆಯೇ ಎಂದು ನೋಡಲು ಒಳ ಹೊಕ್ಕೆ, ಅಣ್ಣ ಒಂದು ಸಣ್ಣ ತೋಪಿನಲ್ಲಿ ಹಾಲನ್ನು ಬಿಸಿ ಮಾಡಲಿಟ್ಟು ಸ್ನಾನಗೃಹ  ಪ್ರವಶಿಸಿದ್ದ, ಒಲೆಯಲ್ಲಿನ ಹಾಲು ಆಗಲೇ ಉಕ್ಕಿ ಓಲೆ ಮೇಲೆ ಬಿದ್ದಾಗಿತ್ತು,ನಾನು ಓಲೆ ಆರಿಸಿ ಅಲ್ಲೇ ಹತ್ತಿರ ಬಿದ್ದಿದ್ದ ತುಂಡು ಬಟ್ಟೆಯಿಂದ ಬಿದ್ದ ಹಾಲನ್ನು ಒರಸುತ್ತಿದ್ದೆ,
ಸ್ನಾನ ಮುಗಿಸಿ ಒಳಗೆ ಬಂದ ಗಣೇಶಣ್ಣ ನನ್ನಲ್ಲಿ "ಎದ್ದಿಯೇನಪ್ಪಾ.. ರಾಜಕುಮಾರ... ಒಲೆ ಒರಸುವ ಕೆಲಸಕ್ಕೆ ಯಾಕೆ ಕೈ ಹಾಕಿದೆ ? ನಾನೇ ಒರಸುತಿದ್ದೆನಲ್ಲ, ಅಡುಗೆಮಾಡಿ ಕೈತುತ್ತು ಉಣಿಸುವವನಿಗೆ ಒಲೆ ಒರಸುವುದು ದೊಡ್ಡ ಕೆಲಸವಲ್ಲ, ಹೋಗಿ ಮಲಗಿಕೋ, ಪ್ರೇಮ ನಶೆ ಇನ್ನು ಇಳಿದಿಲ್ಲ, ಅನುಭವಿಸು ನಶೆ,,,"   ಅವನ ಮಾತಿನಲ್ಲಿ ಏನೋ ಕೊಂಕು ಅಡಗಿರುವುದನ್ನು ಅವನ ಮಾತಿನ ಧಾಟಿಯೇ ವಿವರಿಸುತಿತ್ತು, ಯಾರಾದರು ಎಷ್ಟು ದಿನ ನಮ್ಮ ಹೊಟ್ಟೆ ತುಂಬಿಸುವರು, ಇನ್ನು ನಾನೇ ನಮ್ಮಿಬ್ಬರ ಜವಾಬ್ಧಾರಿ ಹೊರಬೇಕು, ವಸುಂದರನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದೆಲ್ಲ ಕನಸು ಕಂಡಿದ್ದೆ ಆದರೆ ವರೆಗೆ ನಾನು ಅದಕ್ಕೆ ಮುನ್ನುಡಿಯೇ ಹಾಕಿರಲಿಲ್ಲ.
 

ವಸುಂದರ ನಿದ್ದೆ ಕಣ್ಣಿನಲ್ಲೇ ನನ್ನನರಸುತ್ತಾ ಬಂದಳು, ಗಣೇಶಣ್ಣ ಇರುವುದನ್ನು ಗಮನಿಸದೆ ನನಗೆ ಗಟ್ಟಿಯಾಗಿ ತಬ್ಬಿ ಮುತ್ತಿಟ್ಟಳು. ಅಲ್ಲೇ ಇದ್ದ ಗಣೇಶಣ್ಣನಿಗೆ ನಾಚಿಗೆ ಆಗಿ ಕೈಯಲ್ಲಿದ್ದ ಹಾಲಿನ ತೋಪನ್ನು ಕೆಳಗೆ ಹಾಕಿದ,ಎಲ್ಲ ಹಾಲು ನೆಲದ ಪಾಲಾಯಿತು, ಕೆಲಸಕ್ಕೂ ತಡವಾಗುತಿತ್ತು ಅವನಿಗೆ, ಯಾವುದೇ ಸಂದರ್ಭ ನಮಗೆ ಅಂದು ಪೂರಕವಾಗಿರಲಿಲ್ಲ, ಹಿಂದಿನದಿನದ ತನ್ನ ಮೇಲೆ ಮೇಲಿನ ಅಧಿಕಾರಿ ತೋರಿದ ಕೋಪ, ವಾರದಿಂದ ಬಾಡಿಗೆ ವಸೂಲಿಗೆ ಬರುತಿದ್ದ ಮನೆ ಒಡೆಯನ ಮೇಲಿನ ಕೋಪ, ಮನೆಯೊಳಗಿನ ಗೆಳೆಯರನ್ನು ಹೊರ ಹಾಕಿ ಅವರ ಕೈಯಿಂದ ಕೇಳಿದ ಮಾತುಗಳು, ಎಲ್ಲಾ ನೆನಪಿಸಿ ಕೊಂಡು ನಮ್ಮಿಬ್ಬರ ಮೇಲೆ ಒಂದೊಂದೆ  ಜ್ವಾಲಾಗ್ನಿ  ಬಿಡಲಾರಂಭಿಸಿದನು.
 
ನಾವು ಅವನಿಗೆ ಹೊರೆ ಆಗುತ್ತಿದ್ದೇವೆ ಎಂಬುದನ್ನು ಅವನ ಕೊಂಕು ಮಾತಿಂದಲೇ ತಿಳಿದು ಕೊಂಡೆವು.ಇನ್ನು ಕೂತು ಉಣ್ಣುವುದು ಸಮಂಜಸ ಅಲ್ಲ ಏನಾದರು ದುಡಿದು ತಿನ್ನಬೇಕು ಎಂಬ  ವಿಶಾಕಪಟ್ಟಣಕ್ಕೆ ಹೋಗುವಾಗಿನ ಕಿಚ್ಚು ಮತ್ತೆ ಜಾಗ್ರತವಾಯಿತು.ಮನೆಯಲ್ಲಿ ಅಂದು ತಿನ್ನಲು ಸ್ವಾಭಿಮಾನ ಅಡ್ಡ ಬಂತು, ಬೇಗನೆ ಬಟ್ಟೆ ತೂರಿಸಿಕೊಂಡು ಕೆಲಸ ಹುಡುಕಲು ಹೊರಟೆ.ಅಣ್ಣ ಕೆಲಸ ಕೊಡಿಸುತ್ತೇನೆ ಅಂದಿದ್ದೇನೋ ನಿಜ, ಆದರೆ ಅವನಿಂದ ಸಹಾಯ ಬೇಡಲು ಮನಸ್ಸು ಒಪ್ಪಲಿಲ್ಲ. ನಾನು ನನ್ನ ಪಾಡಿಗೆ ಮನೆಯ ಒಂದು ದಿಕ್ಕಿಗೆ ಮುಖ ಮಾಡಿದೆ, ಅವ ಇನ್ನೊಂದು ದಿಕ್ಕಿಗೆ.
 
ನನ್ನ ನಡೆ ನೋಡಿ ಅವ ನನ್ನನ್ನು ಕರೆದು "ಜನಾರ್ಧನ , ಬಾ ನನ್ನೊಂದಿಗೆ, ನನಗೆ ನಿನ್ನ ಮೇಲೆ ಕೋಪ ಇಲ್ಲ ಕಣೋ, ನಿನ್ನ ನಿರ್ಧಾರ ನಿನ್ನ ಬಾಳಿಗೆ ಕೆಡುವಾಗಬಾರದು ಎಂಬುದೇ ನನ್ನ ಆಸೆ, ಆದ ಕಾರಣ ನಾನು ನಿನ್ನ ಮೇಲೆ ರೇಗಿದ್ದು, ನನ್ನಲ್ಲಿನ ಅದೆಷ್ಟೋ ವಿಚಾರ ನಾನು ನಿನ್ನಲ್ಲಿ ಹೇಳಲಿಲ್ಲ, ನನಗೆ ಉತ್ತಮ ಕೆಲಸವೇನೋ ಇತ್ತು ಆಗ ನಾನು ನಿನಗೆ ಕೆಲಸ ಕೊಡುತ್ತೇನೆ ಅಂದಿದ್ದು ನಿಜ,ಆದರೆ ಒಂದು ವಾರದಿಂದ ನನಗೆ ಕೆಲಸವಿಲ್ಲ, ಮನೆಯಲ್ಲಿ ಕೂಡಿಟ್ಟ ಹಣವು ಮುಗಿಯುತ್ತ ಬಂತು, ಅದಕ್ಕಾಗಿಯೇ ರೇಗಿದ್ದು"
ಅವನ ಬಾಯಿಂದ ಮಾತು ಕೆಳುತಿದ್ದಂತೆ, ನಾನು "ಏನಾಯ್ತು ಗಣೇಶಣ್ಣ? ೧೨೦೦ ರುಪಾಯಿಯ ಒಳ್ಳೆ ಕೆಲಸ ಅನ್ನುತ್ತಿದ್ದಿಯಲ್ಲ? ಏನಾಯ್ತು?"
 
ಮನೆ ದಾಟಿ ಪಕ್ಕದ ರಸ್ತೆಯಲ್ಲಿ ನಾನು ಮತ್ತು ಅವ ನಡೆಯುತಿದ್ದೆವು,ಇವತ್ತು ಬರಬೇಕಾದರೆ ವಸುಂದರೆಯ ಮುಖ ನೋಡಿರಲಿಲ್ಲ, ಬಾಯ್  ಹೇಳಲಿಲ್ಲ ಎಂಬುದು ನೆನಪಿಗೆ ಬಂದು ನಾನು ಪುನಃ ಹಿಂತಿರುಗಿ ನೋಡಿದೆ.
 
ಅವಳು ನನ್ನ ನೋಟಕ್ಕಾಗಿ ಮನೆಯ ಪಕ್ಕದ ಓಣಿಗೆ ಬಂದು ನಮ್ಮಿಬರ ನಡೆಯನ್ನೇ ನೋಡುತಿದ್ದಳು, ನಾನು ತಿರುಗುತಿದ್ದಂತೆ, ಅವಳ ಮುಖ ಮುಗಿಲನ್ನು ಕಂಡ ನವಿಲಿನಂತೆ ನರ್ತಿಸಿತು, ಮನ ಅವಳನ್ನು ಹೋಗಿ ಮುದ್ದಿಸುವ, ಎನ್ನುತಿತ್ತು ಆದರೆ ವಾಸ್ತವ ನೆನಪಾಗಿ ಬಂದು ತುಟಿಯ ಅಂಚಿನಿಂದ ಗಾಳಿಯಲ್ಲೇ ನನ್ನ ನಲ್ಲೆಗೆ ಮುತ್ತಿಟ್ಟೆ, ಅವಳು ಗಾಳಿಯಲ್ಲಿ ತೇಲಿ ಬಂದ ಅನುರಾಗದ ಅಲೆಯಲ್ಲಿ ಕಳೆದು ಹೋದಳು. ನಾನು ಅಣ್ಣನನ್ನು ಹಿಂಬಾಲಿಸಿದೆ.

ಅವನು ಮುಂದುವರಿಸಿದ "ಕಳೆದ ವಾರ ನೀವು ಇಲ್ಲಿ ಬಂದಿರುವ ಹೊಸದರಲ್ಲಿ ನಾನು ನಿಮ್ಮ ಆರೈಕೆ ಮಾಡುತ್ತಾ ಮಾಡುತ್ತಾ ನನ್ನ ಕಛೇರಿ ತಡವಾಗಿ ತಲುಪಿದೆ, ನನ್ನ ಮೊದಲಿನ ಫಾಳಿಯವನು ದಿನ ರಜೆಯಲ್ಲಿ ಇದ್ದ ಎಂಬುದನ್ನು ಮರೆತಿದ್ದೆ, ಫಾಳಿಯ ಕೆಲಸ ಮಾಡಲು ನನ್ನ ಅಧಿಕಾರಿ ಹೇಳಿದ್ದರು, ನಾನು ಕಂಪೆನಿ ತಲುಪುವಾಗ ಅಲ್ಲಿ ಯಾರಿರದ್ದು ನೋಡಿದ ಬಳಿಕವೇ ನನಗೆ ಹಿಂದಿನ ದಿನದ ಮಾತು ನೆನಪಿಗೆ ಬಂದದ್ದು, ಅದೇ ಗೋಡೆ ಬದಿಯ ನನಗಾಗಿ ಇಟ್ಟಿದ್ದ ಬೆಂಚ್ ಮೇಲೆ ಕೂತು ರಾತ್ರಿ ಕಳೆದೆ, ಬೆಳಗ್ಗೆ ಮನೆಗೆ ಬಂದು ಪುನಃ ನಿಮ್ಮ ಚಾಕರಿಯಲ್ಲಿ ಕಳೆದೆ. ನಿಮ್ಮನ್ನು ಬೆಂಗಳೂರು ನಗರ ಸುತ್ತಿಸಲು ಕರಕೊಂಡು ಹೋದೆ. ಸಿನೆಮಾ,ಪಾರ್ಕ್ ಸುತ್ತಿಸಿ ನಿಮ್ಮನ್ನು  ಮನೆಗೆ ಬಿಟ್ಟು,ನಾನು ಅಂದಿನ ಡ್ಯುಟಿಗೆ ಕಛೇರಿ ತಲುಪಿದಾಗ ನನಗೆ ನನ್ನ ತಪ್ಪಿನ ಅರಿವಾದದ್ದು..."

"
ಯಾವ ತಪ್ಪು, ಏನಾಯ್ತು ...? "
"
ಹಿಂದಿನದಿನ ಯಾರೂ ಕಾರ್ಯದಲ್ಲಿರದನ್ನು  ನೋಡಿ ಯಾರೋ ಕಛೇರಿಗೆ ಕನ್ನ ಹೊಡೆದಿದ್ದರು.ಅಚ್ಚುಕಟ್ಟಾಗಿ ತಮ್ಮ ಕೆಲಸ ಮುಗಿಸಿ ನಾನು ಡ್ಯುಟಿಗೆ ತಲುಪುವಾಗ ಜಾಗ ಖಾಲಿ ಮಾಡಿದ್ದರು, ಯಾವುದರ ಪರಿವಿಲ್ಲದೆ ನಾನು ನನ್ನದೇ ಲೋಕದಲ್ಲಿ ನಿಮ್ಮೊಂದಿಗೆ ಮಾರನೆ ದಿನ ಕಳೆದೆ, ನನ್ನ ಹುಡುಕಿ ಪೋಲಿಸ್ ನಮ್ಮ ರೂಂ ಕಡೆಗೂ ಬಂದಿದ್ದರು, ಆದರೆ ನಾವು ಇರದ ಕಾರಣ ನನ್ನ ಮೇಲೆ ಸಂಶಯ ಇನ್ನು ಹೆಚ್ಚುತ್ತಾ ಹೋಯಿತು, ಸಂಜೆ ಪುನಃ ಕಛೇರಿ ತಲುಪಿದಾಗ ನನ್ನನ್ನು ಬಂಧಿಸಿ ಪಕ್ಕದ ಪೋಲಿಸ್ ಸ್ಟೇಶನ್ ಕರಕ್ಕೊಂಡು ಹೋಗಿ ಬಂಧನದಲ್ಲಿರಿಸಿದರು, ಬೇಡವಾದ ಹಿಂಸೆಗೆ ತುತ್ತಾಗ ಬೇಕಾಗಿ ಬಂತು. ಎರಡು ದಿನದ ಬಳಿಕ ಬೇರೆಲ್ಲೋ ಕಳ್ಳರು ಸಿಕ್ಕ ನಂತರ ನನ್ನನ್ನು ಸ್ಟೇಶನ್ ನಿಂದ ಬಿಟ್ಟರು, ಆದರೆ ನಾನು ನನ್ನ ಡ್ಯುಟಿ ಮರೆತು ನನ್ನ ಕೆಲಸದಲ್ಲಿ ಬ್ಯುಸಿ ಆಗಿದ್ದ ತಪ್ಪಿಗೆ ನನ್ನ ಕೆಲಸ ನನ್ನಿಂದ ಕಸಿದು ಕೊಳ್ಳಲಾಗಿತ್ತು, ನನ್ನ ಬೆಂಚ್ ಮೇಲೆ ಆಗಲೇ ಡ್ಯುಟಿಗೆ ಬಂದ ಸೆಕ್ಯುರಿಟಿಯವನಿಂದ ನಾನು ಸೆಲ್ಯೂಟ್ ಪಡೆದು ಜಾಗ ಅವನಿಗೆ ಬಿಟ್ಟು ಕೊಟ್ಟೆ. ಅಲ್ಲಿಂದ ಇಲ್ಲಿ ವರೆಗೆ ಕೆಲಸ ಹುಡುಕುತಿದ್ದೇನೆ, ನನ್ನ ಮೇಲಿರುವ ಆಪಾದನೆಯಿಂದಾಗಿ ಕೆಲಸ ಇಲ್ಲಿವರೆಗೆ ಸಿಗಲಿಲ್ಲ."
 
ನಾನು "ಇಂತಹ ವಿಚಾರ ನಮ್ಮಿಂದ ಯೆತಕ್ಕಾದರು ಅಡಗಿಸಿದಿರಿ? " ಅಂದೆ.
 
ಅವನು ಮುಂದುವರಿಸಿದ "ಆಗ ತಾನೇ ನಿಮ್ಮ ಬಾಳ ಪಯಣಕ್ಕೆ ಕಾಲಿಟ್ಟ ನಿಮಗೆ ನಾನು ಯಾಕಾಗಿ ವಿಚಾರ ಹೇಳಲಿ, ಒಂದು ವೇಳೆ ಹೇಳಿದರೆ, ವಸುಂದರನಿಗೆ ತನ್ನ ಕಾಲ್ಗುಣದಿಂದಲೇ ನನ್ನ ಕೆಲಸ ಹೋಯಿತು ಅಂದು ಕೊಂಡಾಳು, ಅಲ್ಲದೇ ನಿನ್ನಲ್ಲಿ ಇಂಥಹ ಭಾವನೆ ಮೂಡಿ ನೀನು ಅವಳನ್ನು ದೂರ ಮಾಡುವಿಯಾ ಅಂದು ಕೊಂಡೆ, ನೀವು ಎಲ್ಲರನ್ನು ಎದುರು ಹಾಕಿ ಮದುವೆ ಆಗಿದ್ದಿರಾ, ನಿಮ್ಮ ಪ್ರೇಮ ಕಥೆಗೆ ನಾನು ಇತರರಂತೆ ಮುಳ್ಳಾಗುವುದು ಬೇಡ ಎಂದು ಹೇಳಲಿಲ್ಲ, ಅದೇ ಕಾರಣಕ್ಕಾಗಿಯೇ ನಾನು ರಾತ್ರಿ ಫಾಳಿಯ ನೆವ ಒಡ್ಡಿ ಮನೆಗೆ ಬರುತಿರಲಿಲ್ಲ, ಅಸಲಿಗೆ ನಾನು ಮನೆಯ ಪಕ್ಕದ ಬಸ್ ಸ್ಟಾಪ್ ನಲ್ಲಿ ರಾತ್ರಿ ಕಳೆಯುತಿದ್ದೆ."
ಗಣೇಶಣ್ಣನ ಮಾತು ಕೇಳಿದ ಮೇಲೆ ಅವನಲ್ಲಿ ಇನ್ನು ಸಂಬಂಧ ಗಾಡವಾಯಿತು, ನೊಂದ  ಹೃದಯಕ್ಕೆ ಆಸರೆ ನೀಡಿ ಮೊದಲಿಗೆ ಅವ ಹತ್ತಿರವಾಗಿದ್ದ, ಈಗ ಅವನು ಕಣ್ಣಮುಂದೆ ನಲಿದಾಡುವ ದೇವರೇ ಆಗಿ ಹೋದ.


ನಾನು ಅವನಲ್ಲಿ "ಅಣ್ಣಾ, ನಾವಿಬ್ಬರು ಕೆಲಸ ಹುಡುಕುವ  ಸಿಕ್ಕೆ ಸಿಕ್ಕುತ್ತದೆ, ಸುಖ ಜೀವನ ನಮ್ಮದಾಗುತ್ತದೆ, ದೇವರಿದ್ದಾನೆ ನಮ್ಮೊಂದಿಗೆ, ಹಿಂದೆ ಅದದನ್ನೆಲ್ಲ ಮರಿ, ನಾವಿಬ್ಬರು ಹೊಸ ವ್ಯಕ್ತಿ ಗಳಾಗಿ ದೊಡ್ಡ ಊರಲ್ಲಿ ಕೆಲಸ ಹುಡುಕುವ,ನಡಿ." ಅಂದೆ.
 
ನಮ್ಮಿಬ್ಬರಲ್ಲಿ ಯಾವ ಕೆಲಸ ಸಿಕ್ಕರೂ ಮಾಡುವ ಛಲವಿತ್ತು, ಅವತ್ತಿಗೆ ನಮ್ಮ ಅದೃಷ್ಟವು ನಮ್ಮೊಂದಿಗಿತ್ತು, - ಸಣ್ಣ ಸಣ್ಣ ಕೆಲಸ ಹುಡುಕಿದ ನಮಗೆ ಹತ್ತಿರ ಹಾಕಿದ್ದ ಹೊಸ ಹೋಟೆಲ್ ಕುರಿತಾದ ಬ್ಯಾನರ್ ಇನ್ನೊಂದು ಆಶಾಕಿರಣ ಮೂಡಿಸಿತು, ನಾವಿಬ್ಬರು ಅಲ್ಲಿ ಹೋದೆವು, ಅವರಿಗೂ ನಮ್ಮ ಅಗತ್ಯವಿತ್ತು, ಗಣೇಶಣ್ಣನ ವಯಸ್ಸು, ಅನುಭವ ಮತ್ತು ದೇಹ ಸ್ಥಿತಿ ನೋಡಿ ೧೦೦೦ ರುಪಾಯಿಯ ಸೆಕ್ಯುರಿಟಿಯ ಕೆಲಸ, ನನಗೆ ೭೦೦ ರುಪಾಯಿಯ ಸುಪ್ಪ್ಲೇಯರ್ ಕೆಲಸ ಸಿಕ್ಕಿತು, ಹೋಟೆಲ್ ಆದ ಕಾರಣ ಹೊತ್ತಿನ ಊಟ-ತಿಂಡಿಯ ಚಿಂತೆ ಇರಲಿಲ್ಲ, ಹೇಳಿದ ಸಂಬಳ ನಮ್ಮಿಬ್ಬರಿಗೂ ಹಿಡಿಸಿತು. ಹೋಟೆಲ್   ಯಜಮಾನ ನನಗೆ ೫೦ ರುಪಾಯಿ ಅಡ್ವಾನ್ಸ್,ಅವನಿಗೆ ೧೦೦ ರುಪಾಯಿ ಅಡ್ವಾನ್ಸ್ ಕೊಟ್ಟರು, ಜೊತೆಗೆ ಉದ್ಗಾಟನೆ ದಿನದ ಸಿಹಿ ತಿಂಡಿಯ ಪಟ್ಟಣವನ್ನು  ಕೊಟ್ಟು ಮಾರನೆ ದಿನದಿಂದ ಕೆಲಸಕ್ಕೆ ಬರುವಂತೆ ಹೇಳಿದರು.
ಅದೇ ಖುಷಿಯಲ್ಲಿ ನಾನು, ಅಣ್ಣನು ಮನೆ ತಲುಪಿದೆವು.
 

೧೩


ಮನೆಯ ಬಾಗಿಲು ತೆರೆದು ಒಳ ಪ್ರವೇಶಿಸಿದೆ, ವಸುಂದರೆ ಒಂದು ಮೂಲೆಯಲ್ಲಿ ತಲೆ ಕೂದಲೆಲ್ಲ ಕೆದರಿಕ್ಕೊಂಡು ಮುಂಗಾಲಿಗೆ ಹಣೆ ಇಟ್ಟು ಕೂಗುತ್ತಾ ಕುಳಿತಿದ್ದಳು, ನಾನು ಇವಳು ಬೆಳಗ್ಗಿನ ಮಾತಿಂದ ಇನ್ನೂ ಹೊರಬಂದಿಲ್ಲ, ಅದನ್ನೇ ನೆನಪಿಸಿ ಮರಗುತಿದ್ದಾಳೆ ಅಂದು ಕೊಂಡೆ, ನಾನು ಅವಳ ಬಿಚ್ಚಿದ್ದ ತಲೆಕೂದಲನ್ನು ಮೆಲ್ಲನೆ ಒರಸಿ

"
ವಸುಂದರ , ಇನ್ನು ನಾವಿಬ್ಬರು ಸುಖವಾಗಿರಬಹುದು ನನಗಾಗಿ ನನ್ನ ಅಣ್ಣಾ ಹೊಸ ಕೆಲಸ ಹುಡುಕಿ ಕೊಟ್ಟಿದ್ದಾನೆ, ಹೋಟೆಲ್ ನಲ್ಲಿ ೭೦೦ ರುಪಾಯೀ ತಿಂಗಳಿಗೆ, ಇನ್ನು ಕಣ್ಣಿರು ಹಾಕುವ ಅವಶ್ಯಕತೆ ಇಲ್ಲ, ನಿನಗಾಗಿ ಸಿಹಿ ತಿಂಡಿ ತಂದಿರುವೆ,ಸ್ವೀಕರಿಸು. ಮತ್ತೊಮ್ಮೆ ನಿನ್ನ ಮೊಗದರುಶನ ನೀಡು.. "ಅಂದೆ,
 
ನನ್ನ ಮಾತು ಅವಳ ಮೇಲೆ ಯಾವುದೇ ಪರಿಣಾಮ ಬೀರಿದಂತೆ ಕಾಣಲಿಲ್ಲ,ಅವಳು ಇನ್ನೂ ಅಳುತ್ತಾ ಕುಳಿತಿದ್ದಳು,ಅಣ್ಣನ ತ್ಯಾಗ ಹೇಳುವ ಅಂದುಕೊಂಡಿದ್ದೆ ಆದರೆ ವಿಚಾರದಿಂದ ಬೇಸರ ಉಂಟಾಗಬಹುದು ಎಂದು ಸುಮ್ಮನಾದೆ. ಕ್ಷಣ ಕಾಲ ಮೌನವಿತ್ತು.  

ಬಿಕ್ಕಳಿಸುತ್ತ ಅವಳು ನನ್ನನ್ನು ಅಪ್ಪಿ"ನಾನು ನಿನ್ನ ಪಾಲಿಗೆ ದುರಾದೃಷ್ಟವಂತೆ ... ನನ್ನ ಕೈ ಹಿಡಿದ ಮೇಲೆ ನಿನಗೆ ಏನೆಲ್ಲಾ ಕಷ್ಟ ಅನುಭವಿಸಬೇಕಾಗಿ ಬಂತು ನೋಡು ..."ಅಂದಳು.ಅವಳ ರೀತಿಯ ಒಗಟು ಮಾತು ನನಗೆ ಅರ್ಥವಾಗಲಿಲ್ಲ, ನಾನು "ಏನು ಹೇಳುತ್ತಾ ಇದ್ದೀಯ ಸರಿಯಾಗಿ ನನಗೆ ಅರ್ಥ ವಾಗುವಂತೆ ಹೇಳು .."ಅಂದೆ.ಅವಳು "ನಾನು ದುರಾದೃಷ್ಟವಂತೆ, ನಾನು ನಿಮ್ಮ ಕೈ ಹಿಡಿಯುತಿದ್ದಂತೆ ನಿಮ್ಮ ತಂದೆಯವರನ್ನು ಬಲಿ ತೆಗೆದು ಕೊಂಡೆ,.... "ಅವಳ ಮಾತು ಇನ್ನೂ ಒಗಟು ಒಗಟಾಗಿತ್ತು "ಸರಿಯಾಗಿ ಹೇಳು, ಅರ್ಥವಾಗಲಿಲ್ಲ... " ಅಂದೆ.ಅವಳು "ಇವತ್ತು ನಾನೊಬ್ಬಳೆ ಮನೆಯಲ್ಲಿದ್ದೆ, ಅವಾಗ ಪೋಸ್ಟ್ಮನ್ ಬಂದಿದ್ದ ಅವ ಒಂದು ಕಾಗದ ತಂದಿದ್ದ ನನಗೆ ಮುಂಚಿಂದ ಓದುವ ಚಟ, ಅಣ್ಣನಿಗೆ ಬಂದ ಕಾಗದ ಅದೂ ನಿನ್ನ ಮನೆಯವರಿಂದ ಬಂದ ಕಾಗದ, ಒಬ್ಬಳಿಗೆ ಬೇಜಾರಾಗುತಿದ್ದುದರಿಂದ ಕಾಗದ ತೆರೆದು ಓದಿದೆ,,," ಅನ್ನುತ್ತಾ ಕೈಯಲ್ಲಿ ತನ್ನ ಕಣ್ಣೀರಿಂದ ಒದ್ದೆಯಾಗಿದ್ದ ಇನ್ ಲ್ಯಾಂಡ್ ಲೆಟರ್ ನನ್ನ ಕೈಯಲ್ಲಿ ಇಟ್ಟಳು.

"
ಪ್ರೀತಿಯ ಗಣೇಶಣ್ಣನಲ್ಲಿ ನಿನ್ನ ತಂಗಿ, ಸಾವಿತ್ರಿ ಬೇಡುವ ಆಶಿರ್ವಾದಗಳು,
 
ನೀನು ಕಳುಹಿಸಿದ ನನ್ನ ಶಾಲಾ ಫೀಸ್ ತಲುಪಿತು, ನಾನು ನಿಮ್ಮ ಮಾತಿನಂತೆ ಚೆನ್ನಾಗಿ ಓದುತ್ತಿದ್ದೇನೆ, ನಿಮ್ಮೆಲ್ಲರ ಆಸೆಯಂತೆ ನಾನು ದೊಡ್ಡ ಸಂಬಳದ ಎಂಜಿನೆಯರ್ ಆಗುತ್ತೇನೆಂಬ ವಿಶ್ವಾಸ ನನ್ನಲ್ಲಿದೆ.
 

ನಾನು ಪತ್ರದ ಕಾರಣ ಹೇಳಿ ಬಿಡುತ್ತೇನೆ, ಕಳೆದ ದಿನದಿಂದ ಇಲ್ಲಿ  ಯಾರೂ ನೆಮ್ಮದಿಯಂದಿಲ್ಲ , ಜನಾರ್ಧನ್ ಅಣ್ಣಾ ಒಂದು ಹುಡುಗಿಯನ್ನು ಕದ್ದು ಮದುವೆ ಆಗಿ ಮನೆ ಬಿಟ್ಟು ಓಡಿಹೋಗಿ ಇವತ್ತಿಗೆ ದಿನವಾಯಿತು, ಚಿಕ್ಕಮ್ಮ ಅವನ ಮೇಲೆ ತುಂಬಾನೆ ನಂಬಿಕೆ ಇಟ್ಟಿದ್ದರು, ತನ್ನ ಕುಡುಕ ಗಂಡನಿಂದ ಅವರು ಮೊದಲೇ ತುಂಬಾ ಬೆಂಡಾಗಿದ್ದರು, ಮಗ ಓದಿ ತನ್ನ ಉಳಿದ ಮಕ್ಕಳ ಜವಾಬ್ಧಾರಿ ತೆಗೆದುಕೊಳ್ಳುತ್ತಾನೆ ಅಂದು ಕೊಂಡಿದ್ದರು, ಆದರೆ ಅವನು ಇದು ಯಾವುದನ್ನು ತಲೆಗೆ ತೆಗೆದು ಕೊಳ್ಳದೆ, ಶ್ರೀಮಂತರ ಮಗಳೊಂದಿಗೆ ಓಡಿ ಹೋಗಿದ್ದಾನೆ,ತನ್ನ ಮಕ್ಕಳ ಭವಿಷ್ಯದ ಬಗ್ಗೆ ಅವರು ಚಿಂತಿಸುತಿದ್ದರೆ, ಗಂಡನಾದವ ಬಾರ್ ನಲ್ಲಿ ಮಜಾ ಮಾಡುತ್ತಿದ್ದ.
 

ದಿನದ ಹಿಂದೆ ಮನೆಗೆ ಬಂದು ಚಿಕ್ಕಮ್ಮನೊಂದಿಗೆ ನಿನಗೆ ಮಕ್ಕಳನ್ನು ಹೇಗೆ ಸಾಕಬೇಕು ಎಂದು ಗೊತ್ತಿಲ್ಲ, ಆದ ಕಾರಣ ಮಗ ಓಡಿ ಹೋದದ್ದು ಎಂದು ಜಗಳಕ್ಕೆ ಇಳಿದಿದ್ದರು, ಹೀಗೆ ಮಾತಿಗೆ ಮಾತು ಬೆಳೆಯಿತು, ಮೊದಲೇ ಕಂಠ ಪೂರ್ತಿ ಕುಡಿದು ಬಂದಿದ್ದ ಚಿಕ್ಕಪ್ಪ, ಚಿಕ್ಕಮ್ಮನ ಮೇಲೆ ಕೈಗೆ ಸಿಕ್ಕ ಕತ್ತಿಯಿಂದ ಹಲ್ಲೆ ಮಾಡಲು ಮುಂದಾದರು, ಚಿಕ್ಕಮ್ಮ ಕತ್ತಿಯ ಹೊಡೆತದಿಂದ ತಪ್ಪಿಸಲು ಮಾಡಿದ ಪ್ರಯತ್ನದಲ್ಲಿ ಕತ್ತಿ ಚಿಕ್ಕಪ್ಪನ ಕುತ್ತಿಗೆಯನ್ನೇ ಕತ್ತರಿಸಿತು.

ಕುಡುಕನಾಗಿದ್ದ
ಬೇಜವಬ್ದಾರಿ ತಂದೆ ಹೆಣವಾಗಿ ಬಿದಿದ್ದ, ಪೋಲಿಸ್ ನವರು ಬಂದು ಚಿಕ್ಕಮ್ಮನನ್ನು ಏಳಕ್ಕೊಂಡು ಹೋದರು, ಈಗ ಎಂಟು ಮಂದಿ ಮಕ್ಕಳು ಅನಾಥರಾಗಿದ್ದಾರೆ, ಯಾವುದೇ ಪರಿವಿರದ ಜವಾಬ್ದಾರಿ ಹೊರ ಬೇಕಿದ್ದ ಜನಾರ್ಧನ ಅಣ್ಣಾ ಅವಳೊಂದಿಗೆ ಯಾರಿಗೂ ಕಾಣದಂತೆ ದೂರವಾಗಿದ್ದನೆ, ಇದೇ ೧೨ ನೆ ತಾರೀಕಿನಂದು ಚಿಕ್ಕಪ್ಪನ ೧೨ ನೇ ದಿನದ ಕಾರ್ಯಕ್ಕೆ  ನೀನೆ ಮಗನ ಸ್ಥಾನದಲ್ಲಿ ನಿಂತು ನಡೆಸಿ ಕೊಡಬೇಕು ಎಂದು ಚಿಕ್ಕಮ್ಮ ಜೈಲಿಂದ ಹೇಳಿ ಕಳುಹಿಸಿದ್ದಾಳೆ. ಆದ ಕಾರಣ ಪತ್ರ ತಲುಪಿದಂತೆ ಊರಿಗೆ ಬಾ ..
 

ನಿನ್ನ ದಾರಿ ಕಾಯುತ್ತಿರುವ ಸಾವಿತ್ರಿ
"  
ಪತ್ರ ಓದುತಿದ್ದಂತೆ ನಾನು ನಮ್ಮ ಮನೆಯವರಿಗೆ ಹೇಗೆ ಶತ್ರು ಆದೆ, ನನ್ನ ಮನದ ಚಪಲಕ್ಕಾಗಿ ನನ್ನ ಮನೆಯವರ ಮನವನ್ನು ನೋಯಿಸಿದೆ ಎಂದೆನಿಸಿತು, ನನ್ನ ಸಣ್ಣ ತಪ್ಪಿನಿಂದ ನನ್ನ ತಂದೆಯವರ ಸಾವಿಗೂ ಕಾರಣನಾದೆ, ಜವಾಬ್ದಾರಿ ಹೊತ್ತ ಅಮ್ಮನನ್ನು ಜೈಲು ಸೇರಿಸಿದೆ ಎಂದೆಲ್ಲಾ ಪಾಪ ಪ್ರಜ್ಞೆ ಕಾಡಲಾರಂಬಿಸಿತು.

ಗಣೇಶಣ್ಣ
ನನ್ನಲ್ಲಿ"ಜನಾರ್ಧನ ಮನೆಗೆ ಹೋಗಪ್ಪಾ.. ನಿನ್ನ ತಂದೆಯವರ ಕಾರ್ಯ ನೀನು ಮಾಡ ಬೇಕಾದದ್ದು ಧರ್ಮ,ತಕೋ ೧೦೦ ರುಪಾಯಿ, ಬೇರೆ ಕಾಸಿಲ್ಲ ಕಣಪ್ಪಾ...  "ಎನುತ್ತ ಇವತ್ತು ಬೆಳಗ್ಗೆ ಸಿಕ್ಕ ೧೦೦ ರುಪಾಯಿಯ ನೋಟನ್ನು ನನ್ನ ಕೈಯಲ್ಲಿಟ್ಟ.
ಮನೆಗೆ ಬರಬೇಕಾಗಿದ್ದಾಗ ಇದ್ದ ಸಂಭ್ರಮ ಈಗ ಮಾಯವಾಗಿತ್ತು, ನಾವು ಮಾಡಿದ್ದು ತಪ್ಪು ಎಂದು ನನ್ನ ಎದೆ ಸರಾಸರಿಗಿಂತ ನೂರು ಪಟ್ಟು ವೇಗವಾಗಿ ಬಡಿಯುತ್ತಿತ್ತು.ವಸುಂದರ ತನ್ನಿಂದಲೇ ಹೀಗಾಯ್ತು, ನಾನು ದುರಾದೃಷ್ಟೆ ಎನುತ್ತಾ ಕೊರಗುತಿದ್ದಳು. ಕೈಯಲ್ಲಿರುವ ಕಾಸು ಇಬ್ಬರ ಟಿಕೆಟ್ ಗೆ ಸಾಕಾಗುವಷ್ಟೇ ಇತ್ತು ವಿನಃ ರಾತ್ರಿಯ ಉಟಕ್ಕೆ ಸಾಲುತ್ತಿರಲಿಲ್ಲ, ಮನೆಯಲ್ಲಿನ ಧವಸವು ಮುಗಿದು ಹೋಗಿತ್ತು.ಖಾಲಿ ಹೊಟ್ಟೆಯಲ್ಲೇ ಮೆಜೆಸ್ಟಿಕ್ ಕಡೆಗೆ ಹೋಗುವ ಬಸ್ ಹತ್ತಿದೆವು.

No comments:

Post a Comment