Friday, January 28, 2011

ಆ ಮೊದಲ ಭೇಟಿಯ ಈ ಮಧುರ ಯಾತನೆ

ಆ ಮೊದಲ ಭೇಟಿಯ ಈ ಮಧುರ ಯಾತನೆ
ಒಬ್ಬಂಟಿ ಹೃದಯದೊಳು ಒಂಟಿ ಭಾವದ ವೇದನೆ
ಒಂದು ಕ್ಷಣದಲ್ಲಿ  ಕರಗಿ ಮತ್ತೆ ಹುಟ್ಟುವ ಭಾವನೆ
ಲೋಕದ ಕಿವಿಗೆ ಕೇಳದ ಭ್ರಮಿತ ಸಂಭಾಷಣೆ


ನಿನ್ನೊಳು ನಾ ಅಡಗಿ ಕುಳಿತಿರಲು
ಸಂಜೆಯೋಳು ನನ್ನದ್ಯಾಕೋ ಆ ಅನ್ವೇಷಣೆ, ತಿಂಗಳ ಆ  ಚಂದಿರನೋಳು
ಮನದೊಳು ನನ್ನದ್ಯಾಕೋ  ಆ ವಿಶ್ಲೇಷಣೆ, ಕನ್ನಡಿಯ ಆ ಬಿಂಬದೊಳು
ಕನವರಿಕೆಯೊಳು ನನ್ನದ್ಯಕೋ ಆ ಆಶ್ವಾಸನೆ , ಕಂಬನಿಯಿಳಿದ ಆ ದಿಂಬಿನೋಳು


ನಿನಗೆ ಮಾರಿಬಿಟ್ಟ ಈ ಮನವು
ಒಂಟಿ ಹೆಜ್ಜೆಯಿಟ್ಟು ಓಡುತಿರುವುದ್ಯಾಕೋ, ಜಾರುವ ಬಾನಿನ ಬಣ್ಣದೊಳು
ಕಂಬನಿಯಿಟ್ಟು ಮಿಡಿಯುತಿರುವುದ್ಯಾಕೋ, ಕುಂಕುಮದ ಬಟ್ಟಲಲಿ ರವಿ ಕರಗಲು
ಹಿಂದಿರುಗಲು ತುಡಿಯುತಿರುವುದ್ಯಾಕೋ, ಅರ್ಥವಾಗದ ಪ್ರಶ್ನಾತೀತ ಕಾರಣದೊಳು


ನಿಮ್ಮ 


ಕಾಮತ್ ಕುಂಬ್ಳೆ

Saturday, January 22, 2011

ಹೈದರಾಬಾದ್ ನಿಂದ ಆಗ್ರಾ ವಯಾ ಗ್ವಾಲಿಯರ್





"ಅಮ್ಮ , ಹೇ ಪಟಿ ಅಯಿನಾ ಎವ್ಚಾ ಜಾಯ್ನ , ರಾಜ್ ಮೇಳ್ನಿ... ಏಕ ದಿಸ ರಾಜ್ ಮಾತ್ರ ಮೆಳ್ಳ ಗ್ವಾಲಿಯರ್ ವಚ್ಚುನ್ ಎತ್ತ "(ಈ ಬಾರಿ ಜಾತ್ರೆಗೆ ಬರಲಾಗುವುದಿಲ್ಲ, ರಜೆ ಸಿಕ್ಕಿಲ್ಲ,ಬರೇ ಒಂದೇ ದಿನದ ರಜೆ ಸಿಕ್ಕಿದೆ, ಗ್ವಾಲಿಯರ್ ಗೆ ಹೋಗಿ ಬರ್ತೇನೆ) ಅಂತ ಅಮ್ಮನಿಗೆ ಹೇಳಿ ಆಗಲೇ ಒಂದು ವಾರ ಕಳೆದಿತ್ತು. ಆಫಿಸ್ ನಲ್ಲಿ ವಾರ್ಷಿಕ ಕಾರ್ಯಕ್ರಮದಲ್ಲಿ ನಮ್ಮನ್ನು ನಾವು ತೊಡಗಿಸಿ ಕೊಂಡಿದ್ದುದರಿಂದ ಮ್ಯಾನೇಜರ್ ನ ಕಾಲಿಗೆ ಬೀಳಲು ಸಮಯ ಸಿಗದೇ ಹೋಗಿತ್ತು, ಕೊನೆ ಕ್ಷಣದಲ್ಲಿ ಒಂದು ದಿನದ ರಜೆ ಗೆ ಅಪ್ಪ್ರೂವಲ್ ಪಡೆದು ಗ್ವಾಲಿಯರ್ ಪಯಣಕ್ಕೆ ಹೊರಡುವುದನ್ನು ನಿಶ್ಚಯಿಸಿ ಕೊಂಡೆವು.

೨ ದಿನ ಹಿಂದೆ ತೆರೆಯುವ ತತ್ಕಾಲ್ ನಲ್ಲಿ ಮೂರು ಟಿಕೆಟ್ ಗಳನ್ನೂ ಪಡೆದದ್ದಾಯಿತು.ಸಂಕ್ರಾಂತಿ ಪ್ರಯುಕ್ತ ಶುಕ್ರವಾರದ ರಜೆ ಇತ್ತು, ಸೋಮವಾರ ಸೇರಿಸಿ ನಾಲ್ಕು ದಿನದ ಪ್ರವಾಸವನ್ನು ಪ್ಲಾನ್ ಮಾಡಿಕೊಂಡೆವು, ಮೊದಲಿಗೆ ಡೆಲ್ಲಿ ವರೆಗೆ ಹಾಕಿದ ಪ್ಲಾನ್ ಅನ್ನು ಆಗ್ರಾ ಮತ್ತು ಗ್ವಾಲಿಯರ್ ಗೆ ತಗ್ಗಿಸಿಕ್ಕೊಂಡೆವು.

ರಾತ್ರಿ ೧೦ :೫೫ ರ ಗಾಡಿ ಅದಾಗಿತ್ತು, ಯಾವಾಗಿನಂತೆ ಭಾರತೀಯ ರೈಲ್ವೆ ಮೊನ್ನೇನು ತನ್ನ ಛಾಪನ್ನು ಉಳಿಸಿಕೊಂಡಿತ್ತು, ೩೫ ನಿಮಿಷ ಮೊದಲ ಸ್ಟೇಷನ್ ನಲ್ಲೆ ಲೇಟ್ ಆಗಿ ತಲುಪಿತ್ತು, ಮೂವರು ಪ್ಲಾಟ್ಫಾರ್ಮ್ ನಲ್ಲಿ ನಿಂತು ಹೊಟ್ಟೆ ತುಂಬಿಸಿಕೊಂಡೆವು, ನಮ್ಮಿಂದ ಅಂದು ದೂರವಾದ ಶಮೀಮ, ಸುಜಾತ, ಮತ್ತು ಅಸಾವರಿ ಕುರಿತಾದ ಕೆಲ ಮಾತು ಆಡುತ್ತಿದ್ದಂತೆ, ನಮ್ಮ ರಿಟರ್ನ್ ಟಿಕೆಟ್  ಮಾಡಿಸುವುದರ ಬಗ್ಗೆ ಮಾತು ಬಂದಿತು, ಅಲ್ಲಿ ಇಲ್ಲಿ ಫೋನ್ ಆಯಿಸಿ ಇಬ್ಬರು ಗೆಳೆಯರನ್ನು ಮರುದಿನ ೭ :೪೫ ಕ್ಕೆ ಎದ್ದು ಬುಕ್ ಮಾಡಿಸಲು ಒಪ್ಪಿಸಿದೆವು.(IT  ಸೋಮಾರಿಗಳಿಗೆ ವೀಕ್ ಎಂಡ್ ನಲ್ಲಿ ಮುಂಜಾವಾಗುವುದು ೧೨ ರ ಬಳಿಕ !!!!)ಅದಕ್ಕೆ ಬದಲಾಗಿ ಅವರಿಗೆ ಆಗ್ರಾ ಪೇಟದ ವಾಗ್ಧಾನವು ಆಯಿತು.

ರಾಘು ಅದೇ ಸಮಯಕ್ಕೆ ಫೋನ್ ಅಯಿಸಿದ "ನಾನು ಬಸ್ಸ ನಲ್ಲಿದ್ದೇನೆ ಕಣೋ, ನೀನು ನಾಳೆ ಎಷ್ಟು ಹೊತ್ತಿಗೆ ತಲುಪುತ್ತಿಯಾ..?"
ನಾನು "ಅರ್ರೆ, ನಾನು ಕುಂಬ್ಳೆ ಪ್ಲಾನ್ ಸ್ಕಿಪ್ ಮಾಡಿದ್ದೇನೆ, ನಾನು ಈಗ ಗ್ವಾಲಿಯರ್ ಗೆ ಹೋಗುತ್ತಾ ಇದ್ದೇನೆ." ಅವನಿಗೆ ಕೆಲಸದ ಗಡಿಬೀದಿಯಲ್ಲಿ ನನ್ನ ಪ್ರಯಾಣದ ದಿಕ್ಕು ಬದಲಾಯಿಸಿರುವುದನ್ನು ಹೇಳಲು ಮರೆತ್ತಿದ್ದೆ.

ಇಬ್ಬರಿಗೂ ಊರ ಜಾತ್ರೆ ಎಂದರೆ ತುಂಬಾ ಅಚ್ಚು ಮೆಚ್ಚು, ಇಲ್ಲಿವರೆಗೆ ಯಾವತ್ತು ಮಿಸ್ ಮಾಡಿ ಕೊಂಡಿರಲಿಲ್ಲ, (ಸೆಕೆಂಡ್ ಪಿ.ಯು.ಸಿ ಇರುವಾಗ ನಾವು ಬೇಡಿ ಕಟ್ಟೆಯಲ್ಲೇ ಮಾರನೆ ದಿನದ ಲ್ಯಾಬ್ ಪರೀಕ್ಷೆಗೆ ತಯಾರಿ ನಡೆಸಿದ್ದೆವು, ಲಕ್ಷೋಪಲಕ್ಷ ಜನರ ಜಂಗುಳಿಯಲ್ಲಿ, ನೆಟ್ಟ ಹೊಲೋಜನ್ ದೀಪದ ಕೆಳಗೆ ಓದಿದ್ದೆವು, ವಿಶ್ವೇಶ್ವರಯ್ಯ ನವರ ಆಶಿರ್ವಾದವೇನೋ ಇಬ್ಬರಿಗೂ ಆ ಲ್ಯಾಬ್ ನಲ್ಲಿ ಔಟ್ ಆಫ್ ಔಟ್ ಸಿಕ್ಕಿತ್ತು . :)) ಕಳೆದ ವರುಷವು ಇಬ್ಬರು ಕೆಲಸಕ್ಕೆ ಸೇರಿದ ಹೊಸದರಲ್ಲಿ  ಮೊದಲ ಊರ ಭೇಟಿಯಲ್ಲಿ ಇಬ್ಬರು ಜಾತ್ರೆಯ ಖುಷಿ ಅನುಭವಿಸಿದ್ದೆವು, ಅದೇ ಬೇಡಿ ಕಟ್ಟೆಯಲ್ಲಿ ಇಬ್ಬರು ಸೇರಿ "ಪ್ರತಿವರ್ಷ ಎಲ್ಲೇ ಇರಲಿ ಇಬ್ಬರೂ ಜಾತ್ರೆಗೆ ಭೇಟಿ ಮಾಡುವೆವು "ಎಂದು ಕೊಟ್ಟ ಮಾತಿನ ನೆನಪಾಯಿತು.

ನಾನು ಅವನಲ್ಲಿ "ಸಾರೀ ಕಣೋ, ಬರಲಾಗುತ್ತಿಲ್ಲ, ಹಿಂದೆ ಹೇಳಿದಂತೆ ಆದಿತ್ಯ, ಅವನ ಅಣ್ಣನ ಮದುವೆಯ ಗೌಜಿಯಲ್ಲಿದ್ದಾನೆ , ನನಗೆ  ಅಂದುಕ್ಕೊಂಡಂತೆ ಒಂದು ವಾರದ ರಜೆ ಸಿಗಲಿಲ್ಲ , ಆದಕಾರಣ ಒಂದು ದಿನದ ರಜೆ ಹಾಕಿ ಆ ಮದುವೆಗೆ ಹೋಗುತ್ತಾ ಇದ್ದೇನೆ." ಅಂದೆ.

ಅವನು "ಹುಂ, ಸರಿ ಸುತ್ತಾಡಿ ಬಾ... ಹ್ಯಾಪಿ ಜರ್ನಿ" ಅನ್ನುತ್ತಿದ್ದಂತೆ ಕರೆ ಕಟ್ ಆಯಿತು.

ಮಾತು ಮುರಿದದಕ್ಕೆ ತುಂಬಾನೆ ಬೇಜಾರಾಯಿತು,ಟ್ರೈನ್ ಹತ್ತಿದವನೇ ಈ ಬಗ್ಗೆಯೇ ಮನ ಕನವರಿಸುತಿತ್ತು. ಜೊತೆಯಲ್ಲಿದ್ದ ರಾಜೇಶ್ ಮತ್ತು ಅಮಿತ್ ನನ್ನ ಔಟಾದ ಮೂಡ್ ನೋಡಿ, ಏನೆಂದು ವಿಚಾರಿಸಲು ನಾನು ಏನಿಲ್ಲ ಅಂದೆ, ಅವರಲ್ಲಿ ನನ್ನ ಊರಿನ ಈ ಪ್ರಸಂಗದ ಬಗ್ಗೆ ಮಾತಾಡಿದರೆ "ಜ್ಯಾದ ಸೆಂಟಿ ಮತ್ ಹೋ ಯಾರ್ "ಎನ್ನುತ್ತಾರೋ ಎಂದು ಸುಮ್ಮನಾದೆ. ಮೊಬೈಲ್ನಲ್ಲಿ ಹಿಂದಿನ ವರುಷ ಜಾತ್ರೆಯಸಮಯದಲ್ಲಿ ರೆಕಾರ್ಡ್ ಮಾಡಿದ ನಮ್ಮ ಭಜನಾ ಮಂಡಳಿಯ ಭಜನೆ ಆಲಿಸುತ್ತಾ, ಕಳೆದ ವರ್ಷದ ಫೋಟೋಗಳನ್ನು ನೋಡುತ್ತಾ ಕಂಬಳಿ ಹೊದ್ದು ಕೊಂಡೆ.
ಶುಕ್ರವಾರ ಕಣ್ಣು ಬಿಟ್ಟಾಗ ಟ್ರೈನ್ ನಾಗ್ಪುರ್ ಸ್ಟೇಷನ್ ನಲ್ಲಿತ್ತು. ಈಗ ಮನಸ್ಸು ಪುನಃ ಒಂದು ವರುಷ ಹಿಂದೆ ಹೋಯಿತು, ಇಲ್ಲಿ ಕಳೆದ ನನ್ನ ವೃತ್ತಿ ಜೀವನದ ಮೊದಲ ೨ ತಿಂಗಳು ನೆನಪಾದವು , ಇಲ್ಲಿರುವ ಗೆಳೆಯರಿಗೆ ಫೋನ್ ಆಯಿಸಿದೆ, ಅವರು ನೀನು ಮೊದಲೇ ತಿಳಿಸಿದ್ದರೆ ತಾವು ಸ್ಟೇಷನ್ ನಲ್ಲಿ ಬೇಟಿ ಯಾಗುತ್ತಿದ್ದೆವು ಅಂದರು ಅದಕ್ಕೆ ನಾನು "ಜ್ಯಾದ ಸೆಂಟಿ ಮತ್ ಹೋ ಯಾರ್ !!!" ಅಂದೆ. ಅಲ್ಲೇ ಗಾಡಿಯಲ್ಲಿ ಇದ್ದ ನಾಗ್ಪುರ್ ನ ಸ್ಪೆಷಲ್ ಓರಂಜ್ ಖರೀದಿಸಿದೆ. ನಾಗ್ಪುರ್ ನಲ್ಲಿದ್ದ ಆ ೨ ತಿಂಗಳು ಇದರ ಸ್ವಾದ ಅಸ್ವಾದಿಸಿರಲಿಲ್ಲ, ನಾವಿದ್ದ ಆ ಋತುವಿನಲ್ಲಿ ಬೆಳೆ ಬಂದಿರುವುದಿಲ್ಲ ಅಂದಿದ್ದರು ಅಂದು ಇಲ್ಲಿನ ಗೆಳೆಯರು.ಇದೇ ಅರಳು ಮರಳಲ್ಲೇ ಟ್ರೈನ್ ಹತ್ತಿ ಕೊಂಡೆ.

ಬಾಗ್ ನಲ್ಲಿದ್ದ "ಐ ಟು ಹಾಡ್ ಲವ್ ಸ್ಟೋರಿ" ಓದಲು ಶುರು ಮಾಡಿಕೊಂಡೆ. ಅಪ್ಪರ್ ಬರ್ತ್ನಲ್ಲಿ ಅಮಿತ್ ಮತ್ತು ರಾಜು ಇನ್ನು ಗೊರಕೆ ಹೊಡೆಯುತ್ತಿದ್ದರು,ಟ್ರೈನ್ ಮುಂದೆ ಮುಂದೆ ಸಾಗುತಿತ್ತು, ಸುಂದರ ನಿರೂಪಣೆಯುಳ್ಳ ಕಥೆ ನನ್ನನ್ನು ಅದರಲ್ಲೇ ಲೀನ ಗೊಳಿಸಿತು.

೨ ಕಂತು ಗಳನ್ನೂ ಓದಿಮುಗಿಸಿದ್ದೆ, ಒಮ್ಮೆಲೇ ಓದಿದ ಸಾಲುಗಳನ್ನು ಮತ್ತೆ ಮತ್ತೆ ಒದಲಾರಂಬಿಸಿದೆ, ಎದೆಬಡಿತ ಒಮ್ಮೆಲೇ ಹೆಚ್ಚಿತು, ಮೇಲೆ ನೋಡಿದೆ ಅಮಿತ್, ರಾಜು ಇನ್ನೂ ಗಾಡ ನಿದ್ದೆಯಲ್ಲಿದ್ದಾರೆ, watch ನೋಡಿದೆ ೧ ಗಂಟೆ ಆಗಿ ೧೨ ನಿಮಿಷ ಸೆಕೆಂಡ್ ಮುಳ್ಳಿನ ಚಲನೆಯ ಸದ್ದು ಕೇಳುತಿತ್ತು, ಸುತ್ತಲು ಕಣ್ಣಾಡಿಸಿದೆ, ನಮ್ಮ ಬರ್ಥ್ನಲ್ಲಿ ನನ್ನನ್ನು ಬಿಟ್ಟರೆ ಯಾರು ಇರಲಿಲ್ಲ, ಎದೆಬಡಿತ ಇನ್ನು ಹೆಚ್ಚುತ್ತಾ ಹೋಯಿತು, ಕಂಪಾರ್ಟ್ಮೆಂಟ್ ಕೊನೆಯಲ್ಲಿ ಕೇಳುತಿದ್ದ ದರ್ಪದನಿಯ ಹಾಡು ಹತ್ತಿರ ಬಂದಂತೆ ಹಣೆಯಲ್ಲಿ ಒಂದೊಂದಾಗಿ ಬೆವರಹನಿ ಮೂಡಲಾರಂಬಿಸಿತು.

ಬೆಂಗಳೂರಿನಿಂದ ನಾಗ್ಪುರ್ ಗೆ ಪ್ರಯಾಣಿಸುತ್ತಿದ್ದಾಗ ಆದ ಅನುಭವ ಇವತ್ತು ಮತ್ತೆ ಪುನಃ ಆವರ್ತಿಸುವಂತಾಯಿತು, ಕೈಯಲ್ಲಿದ್ದ ಕಾದಂಬರಿ ಸಾಲುಗಳ ಮೇಲಿದ್ದ ನನ್ನ ಕೈಬೆರಳು ಕಂಪಿಸಲಾರಂಬಿಸಿತು, ಬ್ಯಾಗ್ ನಿಂದ ಕಂಬಳಿ ತೆಗೆದು ಪುನಃ ಹೊದ್ದು ಮಲಗುವ ಅಂದುಕ್ಕೊಂಡೆ, "ಬೇಡ ಹೆದರಬೇಡ ಗಂಡಸಾಗಿ ಶಿಖಂಡಿಗೆ ಹೆದರುತ್ತಿಯಾ?" ಎಂದು ಒಳಮನ ನನ್ನನ್ನು ಪ್ರಶ್ನಿಸಿತು, ಅದದಾಗಲಿ ಎಂದು ನಾನು ಕೈಯಲ್ಲಿದ್ದ ಕಾದಂಬರಿಯನ್ನು ಒದಲಾರಂಬಿಸಿದೆ. ಎಡಗೈ ಹಿಂದಿನ ಜೇಬಿನಲ್ಲಿದ್ದ ಪರ್ಸ್ ತೆಗೆದು ಅದರಲ್ಲಿದ್ದ ೫ ರುಪಾಯಿಯ ನಾಣ್ಯ ತೆಗೆದು ಅವನ/ ಅವಳ ಭೇಟಿಗೆ ನನ್ನನ್ನು ನಾನು ಸನ್ನದ್ಧ ಮಾಡಿಕ್ಕೊಂಡೆ. ಹಿಂದಿನ ಪ್ರಯಾಣದಂತೆ ಅವರ ಬಾಯಿಂದ ಶಪಿಸಿಕೊಳ್ಳಲು ಇಷ್ಟವಿರಲಿಲ್ಲ.

ದನಿ ಇನ್ನೂ ಹೆಚ್ಚುತ್ತಾ ಹೋಯಿತು.ಜೊತೆಗೆ ನನ್ನ ಎದೆಬಡಿತವೂ, ಅವನ ಹೆಜ್ಜೆ ಹಿಂದಿನ ಬರ್ತ್ ನಿಂದ ನನ್ನ ಬರ್ತ ಗೆ  ಇಡುತ್ತಿದ್ದಂತೆ, ಕಣ್ಣು ಮುಚ್ಚಿಕ್ಕೊಂಡೆ ಅವನು ಜೀವನದ ನೈಜತೆಯ ಕುರಿತಾದ ಒಂದು ಹಾಡು ಹಾಡುತ್ತಿದ್ದ, ೨೦ ಸೆಕೆಂಡ್ ಆದರೂ ಮೈ ಮುಟ್ಟದೇ ಅವನದೇ ಧಾಟಿಯಲ್ಲಿ ಹಾಡು ಮುಂದುವರೆಸಿದ್ದ, ನಾನು ಮೆಲ್ಲನೆ ಕಣ್ಣು ತೆರೆದೆ, ಇಲ್ಲಿ ನನ್ನ ಆಲೋಚನೆ ತಪ್ಪಾಗಿತ್ತು, ಅವನು ಸಭ್ಯ ಕುರುಡ ಅಂಗವಿಕಲನಾಗಿದ್ದ. ಹೃದಯ ಮತ್ತೆ ತನ್ನ ನೈಜ ಹಿಡಿತ ಪಡಕ್ಕೊಂಡಿತು. ಅವನ ಬಾಯಿಯಿಂದ ಬಂದ ಸಾಲುಗಳು ನನ್ನನ್ನು ಕೈಯಲ್ಲಿದ್ದ ೫ ರುಪಾಯಿಯನ್ನು ಪುನಃ ಜೇಬಿನಲ್ಲಿ ಹಾಕುವಂತೆ ಮಾಡಿತು, ನಮ್ಮನ್ನು ಹೆದರಿಸಿ ಹಣ ದೋಚುವ ಶಿಖಂಡಿ ಗಳಿಗಿಂತ ಈ ಬಡವನ ಪಾಲಿಗೆ ಹತ್ತು ರುಪಾಯಿ ಹೆಚ್ಚು ಸೂಕ್ತ ಅಂದುಕ್ಕೊಂಡು ಕಿಸೆಯಿಂದ ಹತ್ತು ರುಪಾಯಿಯ ನೋಟ್ ಅನ್ನು ಅವನ ಜೊತೆಯಲ್ಲಿದ್ದ ಸಣ್ಣ ಬಾಲಕನ ಕೈಯಲ್ಲಿ ಇಟ್ಟೆ.

ಟ್ರೈನ್ ಹಾಗೆ ಮುಂದುವರಿಯುತ್ತ ಸಾಗಿತು, ಕಾದಂಬರಿಯಲ್ಲಿನ ಆಸಕ್ತಿ ಗ್ವಾಲಿಯರ್ ತಲುಪಿದ್ದೆ ಗೊತ್ತಾಗಲಿಲ್ಲ.ರಾಜು ಹೇಳಿದಂತೆ ೧೨ ಗಂಟೆ ಯ ಮೊದಲೇ ತಲುಪಿದ್ದೆವು ಸ್ಟೇಶನ್, ಅಲ್ಲಿನ ಗಡಿಯಾರ ಆಗ "೨೩:೫೯:೧೬ " ಎಂದು ತೋರಿಸುತ್ತಾ ನಮ್ಮನ್ನು ನಗರಕ್ಕೆ ಸ್ವಾಗತಿಸಿತು. ಹಿಂದೆಲ್ಲಾ ಆಫೀಸಿನಲ್ಲಿ "ರಾಜು ಭಾಯ್ ಕಾ ಜಲ್ವಾ!!! " ಎಂಬ ಮಾತು ಆಡುತ್ತಿದ್ದೆವು ಇಲ್ಲಿ ಇಳಿಯುತ್ತಿದ್ದಂತೆ ಅವರ ಜಲ್ವಾ (ಮೋಡಿ ) ಒಂದೊಂದಾಗಿ ಕಾಣಲಾರಂಭಿಸಿತು!!!!

ಸ್ಟೇಶನ್ ಗೆ ಬಂದ ರಾಜುನ ಗೆಳೆಯ ಭರತ್ ಪಕ್ಕದಲ್ಲಿನ ಹೋಟೆಲ್ಗೆ ಕರಕ್ಕೊಂಡು ಹೋದ, ೧೨ ಆದರು ಪೇಟೆಯಲ್ಲಿ ವ್ಯಾಪಾರ ಸಾಗಿತ್ತು.ಕೂತವರಿಗೆ ಏನೂ ವಿಚಾರಿಸದೆ  ಸಪ್ಲೇಯರ್ ರಾಜುವಿನ ಪ್ರಿಯ ಪನ್ನೀರ್ ಮತ್ತು ಮಶ್ರೂಂ ನ ಸಬ್ಜಿ ಮತ್ತು ಅವರ ನೆಚ್ಚಿನ ಬಟರ್ ನಾನ್ ತಂದಿಟ್ಟ, ಇದನ್ನು  ನೋಡುತ್ತಿದ್ದಂತೆ ನಾವಿಬ್ಬರು "
ರಾಜು ಭಾಯ್ ಕಾ ಜಲ್ವಾ!!!" ಅಂದ್ವಿ.ರಾಜು ಆದಿತ್ಯ ಗ್ವಾಲಿಯರ್ ನಲ್ಲೇ ಇಂಜಿನಿಯರಿಂಗ್ ಮುಗಿಸಿದ್ದರು, ಆ ಸಮಯದಲ್ಲಿ ಅವರು ಇಲ್ಲಿ ಬರುತ್ತಿದ್ದರು ಮತ್ತು ಇಲ್ಲಿ ಇವನ್ನೇ ತಿನ್ನುತ್ತಿದ್ದರು ಎನ್ನುವ ನೆನಪು ಸಪ್ಲಾಯ್ ಮಾಡಿದ ಆ ರಾಮುನ ನಗೆಯಲ್ಲಿ ಗೋಚರಿಸುತ್ತಿತ್ತು.

ಹಿಂದಿನ ರಾತ್ರಿಯಿಂದ ಏನೂ ತಿಂದಿರಲಿಲ್ಲ, ಹಿಂದಿನ ಟ್ರೈನ್ ಪ್ರಯಾಣದ ಅಸ್ವಾದಿಷ್ಟ ತಿಂಡಿ ಈ ಬಾರಿ ತಿನ್ನದಂತೆ ಬಾಯಿಗೆ ಬೇಲಿ ಹಾಕಿತ್ತು. ಹಸಿವು ಹೆಚ್ಚಿತ್ತು ಜೊತೆಗೆ ೩ ವರುಷದ ಬಳಿಕ ತನ್ನಲ್ಲಿಗೆ ಬಂದ ಹಳೆ ಗಿರಾಕಿಗೆ ಆ ಬಾಣಸಿಗ ತನ್ನ ಎಲ್ಲಾ ಅನುಭವ ಧಾರೆ ಎರೆದು ನಮಗೆ ಉಣಬಡಿಸಿದ್ದ, ತಂದಿಟ್ಟ ೧೨ ನಾನ್ ಅನ್ನು ಮೂವರೂ ಸೇರಿ ಮುಗಿಸಿದೆವು. ಹೊಟ್ಟೆ ತುಂಬಿದ ಬಳಿಕ ಭರತ್ ನ ಮನೆಗೆ ರಿಕ್ಷಾ ಹಿಡಿದು ಕುಳಿತುಕ್ಕೊಂಡೆವು, ಸಮಯ ೧ ದಾಟಿದ್ದರು ಕೆಲವೊಂದು ಅಂಗಡಿಗಳು ತೆರೆದಿದ್ದವು, ಸಿಗ್ನಲ್ ಲೈಟ್ ಇನ್ನೂ ಹಸಿರು ಕೆಂಪಿನ ಕಣ್ಣ ಮುಚ್ಚಾಲೆ ಆಡುತ್ತಿತ್ತು.ಮಂಗಳೂರಿನಲ್ಲಿ ಬೆಳೆದ ನನಗೆ ೯ ಗಂಟೆ ಗೆ ಶೂನ್ಯ ಪೇಟೆ ನೋಡಿ ಅನುಭವ, ಹೈದರಾಬಾದ್ ಬೆಂಗಳೂರಿನಂತ ದೊಡ್ಡ ನಗರಗಳು ತನ್ನ ೨೪ ಗಂಟೆ ಜಾಗರಣೆ ನಡೆಸುತ್ತವೆ, ಆದರೆ ಒಂದು ಮದ್ಯಮ ಗಾತ್ರದ ನಗರ ಈ ತಡ ರಾತ್ರಿಯಲ್ಲೂ ಕಾರ್ಯನಿರ್ವಹಿಸುವುದು ಕಂಡು ತುಂಬಾ ಅಚ್ಚರಿ ಯಾಯಿತು.


ಮುಂದುವರೆಯುವುದು ......



ನಿಮ್ಮ
ಕಾಮತ್ ಕುಂಬ್ಳೆ 

ಸಹಾಯ


ಹೇ  ಚಲಿಸುವ ಮುಳ್ಳೇ  ಕೇಳುತ್ತಿರುವೆ ನಿನ್ನಿಂದೊಂದು ಸಹಾಯ  
ನನಗಾಗಿ ಒಮ್ಮೆ ನಿಂತು ಕೆಲ ವರುಷ ಹಿಂದೆ ಹೋಗುವೆಯಾ?
 
ಶುದ್ಧ ಶುಭ್ರ ನೀಲ ಆಕಾಶದ ಕೆಳಗೆ
ಅವಳಂತೆ ಚುಂಬಿಸುವ ಬಿಳಿಯ ಕೆನೆಯ ಅಲೆಯೆಡೆಗೆ
ತುಂತುರು ಮಳೆಯ ಮಾಮರದ ಚಿಗುರಿನೆಡೆಗೆ ನನ್ನನ್ನೊಯ್ಯುವೆಯಾ?
 
ಅವಳನ್ನೇ ನೋಡುತ ಕೂತ ಧ್ಯಾನಿ ಎಡೆಗೆ
ಚಲಿಸುವ ಅವಳ ಕಾಲಕೆಳಗಿನ ನನ್ನ ನೆರಳಿನೆಡೆಗೆ
ದನಿಯೊಳು ದನಿಯಾದ ಅವಳ ಒಲವಿನ ನುಡಿಯೆಡೆಗೆ
ನಮ್ಮ ಆ ಸರಸಕೆ ಸಾಕ್ಷಿಯಾದ ಆ ತಂಪಾದ ಸಂಜೆ ಎಡೆಗೆ ನನ್ನನ್ನೊಯ್ಯುವೆಯಾ?
 
ಕಾದು ಸುಸ್ತಾದಾಗ ದೂರದಲ್ಲಿ ಅವಳನ್ನು ಕಂಡಾಗ ಮಾಡಿದ ನಗುವಿನೆಡೆಗೆ
ಪ್ರಿತಿಗಾಗಿ ಹೇಳಿದ ಸುಳ್ಳು ಕಾರಣಗಳ ಸರಮಾಲೆಯೆಡೆಗೆ
ಮನಸು ಬಿಚ್ಚಿ ಮಾತಾಡಿದ ಮಾತಿನೆಡೆಗೆ
ನಾನೇ  ಕಳೆದು ಹೋಗಿ ಅವಳನ್ನ ಪಡಕೊಂಡ ಕ್ಷಣದೆಡೆಗೆ ನನ್ನನ್ನೊಯ್ಯುವೆಯಾ?

ಬಾ ಸಖಿ ನನ್ನೀ ಮನಕೆ


ಕೋಟಿ ಕೋಟಿ ಭಾವಕೆ
ಕನಸಿನ ವೇದನೆಗೆ ಸಾಕ್ಷಿ ಆಗಲು ಬಾ ಸಖಿ ನನ್ನೀ ಮನಕೆ !!
ಮೋಹನ ಮುರಳಿಯ ಇಂಪಾದ ದನಿಗೆ
ಮಂಜಿನ ತಂಪಿನ ಸಿಂಚನಕೆ ಬಾ ನನ್ನೊಂದಿಗೆ !!

ಸರಿಗಮಕೆ ಪದನಿ ಆಗು ಬಾರೆ
ಉಸಿರ ಸ್ವರಕೆ ರಾಗವಾಗಿ ಬಾರೆ
ಸ್ಪರ್ಶದ ಅನುಭವ ವಾಗಿ ಬಾರೆ..
ಸಿಹಿಯಾದ ವೇದನೆಯಾಗಿ  ಬಾ !!

ಅಲೆಗಾಗಿ ಕಾದಿರುವ ಕಡಲಾದೆ ನಾ
ಮೋಡದ ನಿರೀಕ್ಷೆಯ ನವಿಲಾದೆ
ಸ್ವರದ ದಾಹದ ಕೊಳಲಾದೆ
ಬಳಲಿದ ಮನಕೆ ಆಸರೆಯ ಒಡಲಾಗಲು ಬಾ!!

ಮೌನಿ ಹೃದಯವೇ ಚೂರಾದರು ಮಾತಾಡು


ಕಡಲ ತೀರದ ಅಸ್ಥಮಾನಕೆ ನಭದ ನರ್ಥನಕೆ
ಅಲೆಯು ತಾಳ ತಟ್ಟು ತಿರಲು ನೀನ್ಯಾಕೆ ಮೌನಿ ಯಾಗಿರುವೆ?
ಅಪರಿಚಿತ ವಾಗಿದೆ ಈ ಲೋಕವೆಲ್ಲಾ
ಬರಿ ನಿನ್ನಯ ನೆನಪು ನನ್ನ ಮನದಲ್ಲೆಲ್ಲಾ
ಕೇಳಬಾರದೆ ನನ್ನ ಮನದ ಮಾತನ್ನ?
ನಾ ಹೇಳ ಬೇಕಾದ ಗುಟ್ಟೊಂದು ನನ್ನಲ್ಲೇ ಉಳಿದಿದೆ
ಬರಿ ಮೌನವೇ ಮತಾಗಿರಲು
ವಿರಹಿ ಹೃದಯದ ಈ ಬೇನೆ ಅತಿಯಾಗಿದೆ
ನೀ ಜೊತೆಗಿರಲು ಇಂಥ ಭಾವನೆ ಇಂದೇ ಮೊದಲಾಗಿದೆ

ನೀನಿರಲು ಜೊತೆಯಲಿ


ಪ್ರೀತಿಯ ಪರ್ವಕಾಲ ಶುರು ವಾಗಿದೆ ಈಗಲೇ
ಮನಸಲಿ ಮನಸಿನ ಉತ್ಸವ ನಡೆಯುತಿದೆ
ಲೋಕದ ಪರಿವೇ ಇಲ್ಲದೆ ಕನಸಿನ ಮಾರಾಟ ಜೋರಾಗಿದೆ
ಕನಸಿನ ಬೇಡಿಕೆ ಹೆಚ್ಚಾಗಿರಲು ಲೋಕವೇ ಬೇಡವಾಗಿದೆ
ಕೊಂಡು ಕೊಳ್ಳುವ ಹೊಸ ವ್ಯವಹಾರ ನಿಜಕ್ಕೂ ಹಿತ ತಂದಿದೆ
 
ತುಂತುರು ಬೀಳುತಿರಲು
ನಭದಲ್ಲಿ ಸಪ್ತವರ್ಣದ ಭಿಲ್ಲೊಂದು ಮೂಡಿದಂತಿದೆ
ಮುಳುಗುವ ರವಿಗೆ ಮೂಡುವ ಶಶಿಯ ಸ್ವಾಗತ ಕೊರುತಿರಲು
ಮಗುವಾದ ಮನಸ್ಸು ತಾಳ ತಟ್ಟುತಿದೆ
ನಿನ್ನೊಂದಿಗೆ ತೀರದ ಅಲೆಯೇ ಸ್ವರ್ಗದ ಕದವಾಗಿದೆ !!!

ಮರೆಯ ಬೇಕಿದೆ ನಾನಿಂದು


ಮರೆಯ ಬೇಕಿದೆ ನಾ ನಿನ್ನ ,
ಮರೆಯುವ ದಾರಿ ಹೇಳಿಕೊಡೆ ಓ ಚಿನ್ನ
ಜಾತ್ರೆಯ ದಿನದಲ್ಲಿ ತೇರನ್ನು ಮರೆಯಲಾಗುವುದೇ..
ಕೃಷ್ಣನ ಕೈಯಲ್ಲಿನ ಕೊಳಲ ಮರೆಯಲಾಗುವುದೇ..
ಹೆತ್ತ ತಾಯಿಗೆ ತನ್ನ ಕಂದನ ಮರೆಯಲಾಗುವುದೇ..
ಅಂತೆಯೇ ನನಗೂ ಆಗದು ಆದರೂ ಮರೆಯ ಬೇಕಿದೆ ನಾನಿಂದು
 
ನಿನ್ನೋದಿಗಿನ ಆ ಬೆಳಗಿನ ಪ್ರಭಾ ಕಿರಣಗಳ
ವಿಹಾರದ ಸಂಜೆಯ ಉಷಾ ಕಿರಣಗಳ
ಮಾತು ಮುಂದುವರಿದ ಹರಟೆಗಳ
ಮಾತು ಮುರಿದಾಗಿನ ಆ ಮೌನಗಳ
ಮಾತಿನ ನಡುವಿನ ನಿನ್ನೀ ಮೌನವ ಮರೆಯ ಬೇಕಿದೆ ನಾನಿಂದು
 
ಹೊಸ ಚೈತ್ರವು ಕಾದಿಹುದು ನನಗಾಗಿ
ಆದರು ಹಳೆಯ ಆ ಚೈತ್ರದ ನೆನಪೇ ಮಾಸದು
ಅದ್ಯಾವುದೋ ಧನಿಯು ಕೂಗುತಿಹುದು ನನ್ನನು
ಅಲ್ಲಿಯೂ ನಿನ್ನಯ ಬರಿಯ ಪ್ರತಿಧ್ವನಿ ಕೇಳುತಿಹುದು
ನನ್ನೊಳಗಿನ ನಿನ್ನ ಧನಿಯ ಮರೆಯ ಬೇಕಿದೆ ನಾನಿಂದು
 
ಅದ್ಯಾಕೋ ಕೂತಿರುವೆ ನನ್ನೊಳು ಕಾಡುವ ನೆನಪಾಗಿ
ರಾತ್ರಿಯ ನಿದ್ದೆ ಹೀರುವ ಸವಿ ಕನಸಾಗಿ
ಹೊರ ಹೋಗು ನನ್ನಿಂದ
ಮರೆಯ ಬೇಕಿದೆ ನಾನಿಂದು

ನಿನ್ನಯ ನೆನಪಲಿ


ಬರೆಯಬೇಕಿದೆ ಇನ್ನೂ ಹಲವು ಕವಿತೆ,ನಿನ್ನಯ ನೆನಪಲಿ
ಹಗಲಲ್ಲೂ ಕನಸು ಕಾಣುವಾಸೆ,ನಿನ್ನಯ ನೆನಪಲಿ
ಬೆಳದಿಂಗಳೂಟ ಮಾಡುವಾಸೆ,ನಿನ್ನಯ ನೆನಪಲಿ


ನಿನ್ನಯ ನೆರಳಹಿಡಿಯಲು ನಾ ನಿನ್ನ ಹಿಂಬಾಲಿಸಿರುವೆ ಅದ್ಯಾಕೋ?
ಜಗಳವಾಡಿ ರಾಜಿಮಾಡುವ ಹಂಬಲ ಇಂದು ನಿನ್ನೋದಿಗೆ
ಮಳೆಯ ಹನಿಯ ಅಂಚಲಿ ನಿನ್ನಯ ಭಿಂಬ ಕಾಣುವ ಹುಚ್ಚು ಪ್ರಯತ್ನ ಅದ್ಯಾಕೋ?
ಪ್ರೀತಿಯ ಕನಸಲಿ ಈಜಬೇಕಿದೆ ನಿನ್ನಯ ನೆನಪಲಿ


ಯಾರಿಲ್ಲದೂರಿನ ವಿಹಾರಕೆ ಹಾತೋರೆದ್ದದ್ದು ಅದ್ಯಾಕೋ
ಮೌನ ಸಾಕಾಗಿ ಮಾತು ಇನ್ನೂ ಬೇಕಾಗಿ ಪ್ರೇಮಪಲ್ಲವಿ ಹಾಡಬೇಕಿದೆ
ನಿನ್ನಯ ಕಣ್ಣಲಿ ನನ್ನೇ ನಾ ಕಾಣುವ ಹುಂಬ ಯೋಚನೆ ನನ್ನಲ್ಯಾಕೋ?
ಪ್ರೀತಿಯ ಬಲೆಯ ಹೆಣೆಯಬೇಕಿದೆ ನಿನ್ನಯ ನೆನಪಲಿ

ಪ್ರೀತಿ ಸಿಕ್ಕ ಕ್ಷಣ


ಎಂದೋ ಕಂಡ ಕನಸು ಇಂದು ಪುನಃ ಬಿದ್ದಿತು ಅದ್ಯಾಕೋ 
ಎಲ್ಲೋ ಮರೆಯಾದ ಮುಖ ಮನವಿಂದು ನೆನೆಯಿತು ಅದ್ಯಾಕ್ಯೋ 
ಮುಖದ ಮೇಲೆ ಮಂದಹಾಸದ ಮೇರವಣಿಗೆ ಶುರುವಾಯಿತು
ನನ್ನೊಳಗೊಳಗೆ ಸಂತಸದ ಕಾರಂಜಿ ಚಿಮ್ಮಿದದ್ಯಕೋ
ನೀನು ನನ್ನಲ್ಲಿ ಪ್ರೀತಿ ಇದೆ  ಎಂದೊಡನೆ
 
ಹುಡುಕುತ್ತಿದ್ದೆ ಕೋಟಿ ಕೋಟಿ ಕಣ್ಣಲ್ಲಿ
ಕಾಯುತಿದ್ದೆ ಸಾಲು ಸಾಲು ನಿಮಿಷಗಳ
ಕಲ್ಪನೆಯ ಹಾಳೆಯಲ್ಲಿ ನಿನ್ನಯ ಬಣ್ಣ ಮೊಡುತಿದ್ದವು ಈ ಹಿಂದೆ
ಕಣ್ಣೆದುರಲ್ಲಿ ಕುಣಿಯುತಿವೆ ಅವು ಇಂದು ಜೀವತಳೆದು

ನಾ ಕಂಡ ನೀ



ಒಂದೆಡೆ ನಿಂತಿರುವ ನೀರು ನಾನು
ಬೇರೆಡೆಗೆ ಹರಿಯುತ ಸಾಗಿದೆ ನೀನು
ಕೆರೆ ಸರೋವರ ಇಲ್ಲ ನಾ ಕಡಲೋ..
ತೊರೆ ಝರಿ ಇಲ್ಲ ನೀ ನದಿಯೋ ..
ಹರಿಯುವ ನೀರಾದರು ನೀನು
ಬಂದು ಸೇರುವೆ ಈ ಕಡಲು


ತಂಪಾದ ಶಶಿಯು ನಾನು
ಸುಡುವ ರವಿಯು ನೀನು
ನಾ ತಿರುಗಲು ಬಂದಿತು ಧ್ವಾದಶ ಮಾಸ
ನೀನಿರಲು ಬರುವುದು ನವ ವಸಂತ
ನನಗೆ ನೀನೆ ಬೆಳಕಾದರೂ
ಗ್ರಹಣಕೆ ನನ್ನಿಂದಲೇ ನೀ ಬರಿಯ ಕತ್ತಲು


ಹೊರಬಿಟ್ಟ ಬರಿಯ ಉಸಿರು ನಾನು
ಸರಿಗಮ ಮಿಡಿಯುವ ಕೊಳಲು ನೀನು
ಅಂತರಂಗದ ಮೌನ ಸ್ವರವೂ ನಾ
ಹೊರಬಂದ ಇಂಪಾದ ದನಿಯು ನೀ 
ನನ್ನೀ ಉಸಿರ ಸ್ಪರ್ಶ ವಾಹದಿರಲು
ನೀನು ಬರಿಯ ಒಂದು ತುಂಡು ಬಿದಿರು



ಕಾಮತ್ ಕುಂಬ್ಳೆ

ಮೌನ ರಾಗ

ಮೌನ ರಾಗ

ಹಾಗೆ ಸುಮ್ಮನೆ ಗೀಚಿದ ಗೀತೆಗಳು ಹಲವು
ಹೇಳಲಾಗದೆ ಉಳಿದ ಭಾವ ಹಲವು
೬ ಸವಸ್ತರ  ಕಳೆದವು,ಮಾತು ನನ್ನಲೇ ಉಳಿದಿತ್ತು
ಅಂದು ಪ್ರಸ್ತಾವಿಸ ಬೇಕೆಂದೇ ಫೋನಾಯಿಸಲು
ಎನ್ಗಜೆ ದ್ವನಿ ಯೊಂದೇ ಉತ್ತರಿಸಿತು


ರಾತ್ರಿ ನಿದ್ದೆ  ಬಹು ಹೊತ್ತು ಬಾರದಿರಲು
"ಇಂದು ಬೇಡ ಈಗ ತಡ ವಾಗಿಹುದು" ಮನದೊಳಗೆ
ಕನಸ ದಾರಿ ಹಿಡಿಯಲು ಹೊದ್ದು ಕೊಂಡೆ ಅದೇ ಹೊದಿಕೆ
ನನ್ನ ತಳಮಳಕ್ಕೆ ದಿಂಬಿನ ಸಾಂತ್ವನವು ಇತ್ತು


ಆರಕ್ಕೆ ಎದ್ದೆ, ಫೋನಾಯಿಸಿದೆ
ನಿದ್ದೆ ಕಣ್ಣಲ್ಲಿ ಗುನುಗಿದಳು ಆ ನನ್ನ ನಲ್ಲೆ
ಸಂಜೆ ಮಾತಾಡುವ ಎನ್ನುತ್ತಾ ಫೋನ್ ಇಟ್ಟಳು
ಮಾತು ಹಂಗೆ ಉಳಿದಿತ್ತು ನನ್ನೊಳಗೆ

ಆ ದಿನದಲ್ಲಿ ಕಾತುರತೆಯು, ಭಯವು ಇತ್ತು ನನ್ನಲ್ಲಿ,
ಮೊದಲ ಬಾರಿಗೆ ಹೇಳ ಹೊರಟಿದ್ದೆ ಪ್ರೀತಿಯ ಮಾತು ನನ್ನ ಸ್ನೇಹಿತೆಗೆ
ಸಂಜೆಯ ಬರುವಿಕೆಗೆ ಕಾಯುತಿದ್ದೆ
ಆಟ ,ಊಟ ಮಾಡದ ಪರಿವಿರಲಿಲ್ಲ

ಸಂಜೆ ಪುನಃ ಅದೇ ಕರೆಗೆ
ನಲ್ಲೆಯ ಜಾಗದಲ್ಲಿ ಮಾತಾಡುತ್ತಿದ್ದಳು ಅವಳ ಸ್ನೇಹಿತೆ
ನಾನು ಮಾತು ಹೊರಡಿಸುವ ಮುಂಚೆ
ಹೇಳಿ ಬಿಟ್ಟಳು "ರಾಂಗ್ ನಂಬರ್" 

ಆಗ ತಿಳಿಯಿತು ಅವಳಿಗೆ ನಾನಿಷ್ಟ ವಿರಲಿಲ್ಲ
ಬರೇ ನಾನು ಕನಸಿನ ಲೋಕದಲ್ಲಿದ್ದೆ ಅವಳೊಡನೆ
ಆಕೆ ಇಲ್ಲಿ ಯಾರನ್ನೋ ಇಷ್ಟಪದುತಿದ್ದಳು
೬ ವರುಷದಿಂದ ನಾನಂದುಕೊಡಿದ್ದೆ ಅದು ನಾನೇ

ಕೊನೆಗೂ ಉಳಿಯಿತು ನನ್ನ ಮಾತು ನನ್ನಲ್ಲೇ
ಅವಳ ಮಾತು ಅವಳಲ್ಲೇ
ಅವಳ ಸ್ನೇಹಿತೆಯ "ರಾಂಗ್ ನಂಬರ್" ಮಾತ್ರ ನಮ್ಮಿಬ್ಬರ ನಡುವೆ
ಪ್ರೇಮವು ಮುರಿಯಿತು, ಸ್ನೇಹವು ನಿಂತಿತು ಆ ಕರೆಗೆ..

ನಿರೀಕ್ಷೆ

ನಿರೀಕ್ಷೆ




ಬರಿದಾಗಿದೆ ಮನೆಯಂಗಳ
ನಿನ್ನಯ ಆಟದ ದಿನವ ನೆನೆಯುತಲಿದೆ
ಇನ್ನೆಂದೂ ಬಾರದ ದಿನದ ದಾರಿ ನೋಡುತಲಿದೆ
ಬರಿದಾಗಿದೆ ನನ್ನೀ ಮನದಂಗಳ
ನಿನ್ನ ಆ ಮುಗ್ದತೆಯ ನಗುವ ಮೊಗ ಕಾಣುತಿದೆ
ಅಮ್ಮ ನಾ ನೀ ಬರುವ ದಾರಿ ನೋಡುತಲಿರುವೆ

ನನ್ನ ಮೇಲೆ ನೀನಿತ್ತ ಆ ಪುಟ್ಟ ಹೆಜ್ಜೆ
ನಾಲ್ಕನೆ ಹೆಜ್ಜೆಗೆ ಬಿದ್ದಾಗ ಅತ್ತ ಆ ಅಳು
ಮುಂದಿನ ಕೋಟಿ ಹೆಜ್ಜೆಗೆ ಸ್ಪೂರ್ತಿ ನೀಡಿತ್ತಂದು
ಮನೆ ತುಂಬಾ ಗಿಲ್-ಗಿಲ್ ಅನ್ನುತ್ತಿದ್ದ ಆ ಗೆಜ್ಜೆ
ಆರು ತುಂಬಿದರೂ ಹೆಣ್ಣಂತೆ ಅದ ಹಾಕಿ ಸಂಭ್ರಮಿಸುವ ಆ ಲಜ್ಜೆ
ದನಿಯ ಮರೆತು ಮೌನವಾಗಿ ಮೂಲೆ ಪೆಟ್ಟಿಗೆಯಲಿ ಬಿದ್ದಿಹುದು ಇಂದು

ಪಕ್ಕದ ಅಂಗಳದ ಮುದ್ದು ಮಗುವಿನ ತೊದಲ ಮಾತು
೨೦ ವರುಷ ಹಿಂದಿನ ಆ ಸಂಜೆ ಹೊತ್ತು ತಂದಂತೆ
ಆಡಿಹರು ಹಲವರು ಇಲ್ಲಿ ಅದರೂ ನಿನ್ನಾಟ ಮರೆಯಲಾಗದು
ಮಮ್ಮಗಳ ತೊದಲ ಮಾತು ಹೋಲುತಲಿದೆ ನಿನ್ನನ್ನೇ
ಬರೀ ದೂರವಾಣಿಯ ಮಾತಿಗೆ ಹೂಂ ಗುಡುತಿರುವೆ ಸುಮ್ಮನೆ
ನಿನ್ನೊಡನೆಯ ಇಳಿವಯಸಿನ ತಿಳಿಸಂಜೆಯ ಸಂಬಾಷಣೆಗೆ ಕಾಯುತಿರುವೆ

ಬಾ ಈ ಮನೆಯಂಗಳಕೆ,ಮನದಂಗಳಕೆ
ಕಾಯತಲಿರುವರಿಬ್ಬರು ನಿನ್ನ.

ಹುಚ್ಚು ಬಯಕೆ


ನಿನ್ನ ಪ್ರೀತಿಯ ಸಾಲಗಾರ ನಾನಾಗ ಬೇಕಿದೆ
ನನ್ನ  ಕನಸ ಪಾಲುಗಾರ ನೀನಾಗ ಬೇಕಿದೆ
ದಿನಕೆ ನೂರು ಬಾರಿ ಪ್ರೀತಿ ನಾ ಹೇಳಬೇಕಿದೆ
ಈ ವಿಧದಲ್ಲೇ ನಾ ಮಾಡಿದ ಸಾಲ ತೀರಿಸಬೇಕಿದೆ
ನನ್ನ ಕನಸ ಬುತ್ತಿಯ ಕೈ ತುತ್ತು ನಿನಗೆ ತಿನಿಸಬೇಕಿದೆ
ನಿನ್ನೊಂದಿಗೆ ನನ್ನ ಪಾಲು ನಾ ಸವೆಯಬೇಕಿದೆ


ಮುಚ್ಚಿರುವ ನಿನ್ನ ಆ ಕಣ್ಣ ಒಳನೋಟ ನಾ ನೋಡ ಬೇಕಿದೆ
ಆ ಕಣ್ಣಿಗೆ ಅರಿವಾಗದಂತೆ ನಾ ಮುತ್ತನೊಂದು ಇಡಬೇಕಿದೆ
ಬಯಲೋಳು ತುಸುದೂರ ನನ್ನ ನಾ ಮರೆತು ನಿನ್ನ ನಾ ಹಿಂಬಾಲಿಸಬೇಕಿದೆ
ನಿನ್ನ ಪ್ರತಿ ಹೆಜ್ಜೆಯ ಅಚ್ಚಿಗೂ ನನ್ನ ಪಾದ ಮುತ್ತಿಡಬೇಕಿದೆ


ಪ್ರತಿ ಇರುಳು ನಿನ್ನೊಂದಿಗೆ ನಾ ಹುಸಿ ಮುನಿಸು ಮಾಡ ಬೇಕಿದೆ
ಪ್ರತಿ ಮುನಿಸಿಗೂ ಕಾರಣ ನಾನಾಗಿರಬೇಕಾಗಿದೆ
ನೀ ಬಿಕ್ಕಿ ಅಳುವಾಗ ಕಣ್ಣೇರು ಬರುವಾಗ ನಾ ಸಮಾಧಾನ ಮಾಡಿಸಬೇಕಿದೆ
ತೊಡೆಯಲ್ಲಿ ಮಲಗಿಸಿ ನಿನ್ನ ನೇವರಿಸುವ ಕ್ಷಣಕೆ ಅವು ಪನ್ನಿರಾಗಬೇಕಿದೆ

ಕಾಮತ್ ಕುಂಬ್ಳೆ


ನಿರಂತರ


ಬಣ್ಣ ಬಣ್ಣದ ಹೂವಿಂದ ಬಣ್ಣ ಹೀರುವ ಮೋಹ ಚಿಟ್ಟೆಗೆ
ಇಬ್ಬನಿಗೂ ಚಳಿ ಹಿಡಿಸುವ ಆತುರ ಹಿಮಕೆ
ಪಚ್ಚ ಹಸುರಿನ ಪೈರಲಿ ಮರೆಯಾಗುವ ಆಸೆ ಗಿಣಿಗೆ
ನಿನ್ನ ಕಣ್ಣಲಿ ಕುಳ್ಳುವ ಹಂಬಲ ನನ್ನೀ ಕಣ್ಣಿಗೆ
ಮಳೆಯ ತುಂತುರಿಗೆ ಬಾಯಾರಿಕೆ ತೀರಿಸಿಕೊಂಡಿತೇ ಹಂಸ
ಕಾಲದ ವೇಗವ ಹಿಂದಿಕ್ಕುವ ಗಾಳಿಯ ಪ್ರಯತ್ನ ದ್ವಂಸ ಒಂದು ಕ್ಷಣಕೆ ಮಿಂಚಿ ಮರೆಯಾಗಿ ತನ್ನ ಅಸ್ತಿತ್ವ ತೋರಿಸುತಲಿದೆ ಮಿಂಚು
ನೀ ಬಾರದ ನಿಮಿಷಕೆ ತಿಳಿಯದೆ ಒದ್ದೆ ಆದದ್ದೇಕೆ ಈ ಕಣ್ಣ ಅಂಚು

ತನ್ನ ಇತಿಮಿತಿ ಗೊತ್ತಿದ್ದೂ ದಿಗಂತಕೆ ಮುತ್ತಿಕ್ಕುವ ಪ್ರಯತ್ನದಿ ಆ ಗಾಳಿಪಟ
ಕನಸ ಲೋಕಕೆ ಸ್ವಾಗತ ಕೋರಲು ಮಳೆಬಿಲ್ಲ ಮೂಡಿಸಿದೆ ಈ ಬೆಟ್ಟ
ನಾಳೆಯ ಸಾವಿಗೆ ನಗುತಾ ಸುವಾಸನೆಯೊಂದಿಗೆ ಬಿರಿಯುತಲಿದೆ ಮೊಗ್ಗೊಂದು ಇವಲ್ಲಿ ನಿನ್ನನ್ನೆಲ್ಲಿ ಕಳಕೊಂಡೆನೋ ಎಂಬ ದಿಗಿಲಲ್ಲಿ ಮಿಡಿಯುತಿದೆ ಮನ ಒಂದು
ಕಾಮತ್ ಕುಂಬ್ಳೆ

ತೊಡಿಸಲೇ ಮುತ್ತಿನ ತೋರಣ ನಿನ್ನ ಹಣೆಮೇಲೆ


ತೊಡಿಸಲೇ ಮುತ್ತಿನ ತೋರಣ ನಿನ್ನ ಹಣೆಮೇಲೆ
ತಿನಿಸಲೇ ಪ್ರೀತಿಯ ಹೂರಣ ನನ್ನೀ ಕೈಯಿಂದಲೇ

ಮೋಡದ ನಡುವಿನ ಚಂದಿರ ನನ್ನ ಗಾಳಕ್ಕೆ ಬೀಳಬೇಕಿದೆ
ಅದ ತಂದು ನಾ ನಿನ್ನ ಮುನಿಸು ತಣಿಸ ಬೇಕಿದೆ
ನಾ ಕಾಣದ ಬಣ್ಣವ ನೀನೇ ಹುಡುಕ ಬೇಕಿದೆ
ಮಳೆ ಬಿಲ್ಲೊಳು ಆ ಬಣ್ಣವ ಬಳಿಯಲು ನೀ ಬರಬೇಕಿದೆ ||ತೊಡಿಸಲೇ ಮುತ್ತಿನ....||

ಎಂದೂ ನೋಡದ ಕನಸ ಕಾಡುವ ಹಂಬಲ ಕಣ್ಣಿಗೆ
ಅಲ್ಲೂ ನಡೆಯಬೇಕಿದೆ ಬರಿ ನಿನ್ನಯ ನೆನಪ ಮೆರವಣಿಗೆ
ನಾನಾಡದ ಮಾತು ನೀನಿಂದು ಆಲಿಸಬೇಕಿದೆ
ನಿನ್ನ ಮಾತ ನಡುವಿನ ಮೌನದ ವರ್ಣನೆಯೇ ಅಲ್ಲಿರಬೇಕಿದೆ ||ತೊಡಿಸಲೇ ಮುತ್ತಿನ....||

ನನ್ನೋಡಲಿನ ನಿನ್ನ ಹೆಜ್ಜೆಗುರುತು ಮಾಸಬಾರದೆಂಬ ಬಯಕೆ
ತಿರುಗುತ್ತಿರುವ ಸಂಚಾರಿ ಮನಕೆ
ಮನದ ಕಾರ್ಮುಗಿಲಿನ ತುದಿಯೋಳು ನಿನ್ನಗಲಿಕೆಯ ನೋವು
ಕೊರಗುತ್ತಿರುವ ವಿರಹಿ ಮನಕೆ ||ತೊಡಿಸಲೇ ಮುತ್ತಿನ....||

ಈ ಸಂಜೆ ಪ್ರತಿ ಸಂಜೆ ಯಾಗಿರಲಿ ನನ್ನ ನಿನ್ನ ಜೀವನದೊಳು


ನಿನ್ನೊಂದಿಗಿನ ಈ ಸಂಜೆ ಹೆಜ್ಜೆಯೊಳು ಹೆಜ್ಜೆ ಇರಲು
ಅನುರಾಗವು ರಾಗವಾಗಿ ಹೊಮ್ಮುತಲಿರಲು
ಪಾದದ ಕೆಳಗಿನ ಮರಳು ಇನ್ನೂ ಸಡಿಲವಾಯಿತು!!
ಅಲೆಯ ಕರೆಗೆ ಬೆಳಕಿತ್ತ ರವಿಯು ಕಡಲೊಳು ಲೀನನಾಗಲು
ಆ ಕೆಂಬಣ್ಣದ ಪ್ರತಿಬಿಂಬಕ್ಕೆ ನೀನು ಇನ್ನೂ ಕೆಂಪಾಗಲು
ಆಗ ತಾನೇ ಮೂಡಿದ ಚಂದಿರ ನಾಚಿ ಮೋಡದ ಮರೆಯಾದ !!!

ನಿನ್ನೊಂದಿಗಿನ ತುಂಟಾಟ , ಸಂಭಾಷಣೆಯ ಹಲವು ದಿನದ ಕನಸು
ಇಂದು ಸಾಕ್ಷಿಯಾಯಿತು ಅದಕೆ ಈ ಮೂಕ ಕಡಲು
ಮುಗುಳುನಗೆಯ ಆ ಪ್ರಹರಕ್ಕೆ ಬೆಳದಿಂಗಳಿಗೂ ಬೆರಗು
ಮೋಡದ ನಡುವಿನ ಚಂದಿರನಿಗೆ ಅಸೂಯೆ ಮೂಡಿಸಿದ ನಿನ್ನ ನಗೆಯು
ಅದ ದೋಚುವ ಕಳ್ಳ ನಾನಾಗಬೇಕು ಎಂಬ ಆಸೆಯು ನಿತ್ಯವೂ

ರಮಿಸಲು ನಾ ನಿನ್ನ, ನಿನ್ನ ಲಜ್ಜೆಯು ಚಂದಿರನಿಗೂ ಲಜ್ಜೆ ಮೂಡಿಸಿತು
ಮೋಡದೊಂದಿಗಿನ ಕಣ್ಣಾ ಮುಚ್ಚಾಲೆ ನಿಂತೇ ಹೋಯಿತು
ಮೋಡದಲ್ಲೇ ಚಂದಿರ ಮರೆಯಾಗಲು ಅಮವಾಸ್ಯೆಯ ಕತ್ತಲು ಈ ಕಡಲು
ಪ್ರಣಯ ಶಾಲೆಯ ಮೊದಲ ಪಾಠ ಮುತ್ತಲ್ಲೇ ಕಂಡ ಸಂತ್ರಪ್ತಿ
ಮತ್ತೆ ಮೂಡಿದ ನಿನ್ನ ಬೆಳದಿಂಗಳ ನಗೆಗೆ ಶೋಭಿಸಿತು ಪ್ರಕೃತಿ

ಮನಸ ಮಾತ ವಿನಿಮಯ ಈ ಕಡಲ ಒಡಲೊಳು
ಕನಸುಗಳ ವ್ಯವಹಾರ ಯಾರೂ ಇಲ್ಲದ ಈ ಸಂತೆಯೊಳು
ಭಾವದಲ್ಲಿನ ಪಾತ್ರಗಳ ಅನಾವರಣ ಈ ಮರಳ ಮಂಚದೊಳು
ಒಲವಿನ ಚಿತ್ರಗಳ ಅವತರಣ ಜೊತೆಯಾದ ಕೈಯಲ್ಲಿನ ಕುಂಚದೊಳು
ಈ ಸಂಜೆ ಪ್ರತಿ ಸಂಜೆಯಾಗಿರಲಿ ನನ್ನ ನಿನ್ನ ಜೀವನದೊಳು


ಕಾಮತ್ ಕುಂಬ್ಳೆ